ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಎಸ್.ಎಂ.ಕೃಷ್ಣ ವಣನೂರು ಭೇಟಿ ರದ್ದು, ಚೆನ್ನೈಗೆ ಪ್ರಯಾಣ
ಬೆಂಗಳೂರು : ದಲಿತ ಮಹಿಳೆಯನ್ನು ಬೆತ್ತಲೆಗೊಳಿಸಿ ಮೆರವಣಿಗೆ ನಡೆಸಿದ ಬಳ್ಳಾರಿ ಜಿಲ್ಲೆಯ ವಣನೂರು ಗ್ರಾಮಕ್ಕೆ ಶುಕ್ರವಾರ ಭೇಟಿ ನೀಡಬೇಕಿದ್ದ, ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರು, ತಮ್ಮ ಕಾರ್ಯಕ್ರಮವನ್ನು ಬದಲಾಯಿಸಿ ಚೆನ್ನೈಗೆ ತೆರಳಿದರು.
ಗುರುವಾರ ನಿಧನರಾದ ತಮಿಳು ಮಾನಿಲ ಕಾಂಗ್ರೆಸ್ ಸಂಸ್ಥಾಪಕ ಅಧ್ಯಕ್ಷ ಮೂಪನಾರ್ ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳುವ ಸಲುವಾಗಿ ಚೆನ್ನೈಗೆ ತೆರಳಿದ ಕೃಷ್ಣ, ಅಲ್ಲಿಂದ ನೇರವಾಗಿ ದೆಹಲಿಗೆ ಪ್ರಯಾಣ ಬೆಳಸಲಿದ್ದಾರೆ. ದೆಹಲಿಯಲ್ಲಿ ಶನಿವಾರ ನಡೆಯುವ ಎನ್.ಡಿ.ಸಿ. ಸಭೆಯಲ್ಲಿ ಅವರು, ಭಾಗವಹಿಸಲಿದ್ದಾರೆ.
ವಣನೂರಿನಲ್ಲಿ ದಲಿತ ಮಹಿಳೆಯ ಮೇಲೆ ನಡೆದ ದೌರ್ಜನ್ಯವನ್ನು ಒಂದು ಹೀನಾಯ ಕೃತ್ಯ ಎಂದು ಖಂಡಿಸಿರುವ ಮುಖ್ಯಮಂತ್ರಿಗಳು, ತಮ್ಮ ಬದಲಿಗೆ ರಾಜ್ಯದ ಹಿರಿಯ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರನ್ನು ವಣನೂರು ಗ್ರಾಮಕ್ಕೆ ಕಳುಹಿಸಿದ್ದಾರೆ.
ಮುಖಪುಟ / ಕೃಷ್ಣಗಾರುಡಿಯ ಕನ್ನಡಿ
Comments
Story first published: Friday, August 31, 2001, 0:00 [IST]