ಕ್ರಿಕೆಟ್ಗೆ ಹಿಂತಿರುಗಲು ನಿರ್ದಿಷ್ಟ ಕಾಲಮಿತಿ ಚೌಕಟ್ಟಿಲ್ಲ- ತೆಂಡೂಲ್ಕರ್
ಮುಂಬಯಿ : ಪಾದದ ನೋವಿಗೆ ಚಿಕಿತ್ಸೆ ಪಡೆದು ಶುಕ್ರವಾರ ಬೆಳಗ್ಗೆಯಷ್ಟೇ ದಕ್ಷಿಣ ಆಫ್ರಿಕದಿಂದ ಹಿಂತಿರುಗಿದ ಭಾರತದ ಸರ್ವೋತ್ಕೃಷ್ಟ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ತಾವು ಅಂತರರಾಷ್ಟ್ರೀಯ ಕ್ರಿಕೆಟ್ಗೆ ಹಿಂತಿರುಗಲು ನಿರ್ದಿಷ್ಟ ಕಾಲಮಿತಿಯ ಚೌಕಟ್ಟನ್ನು ಹೊಂದಿಲ್ಲ ಎಂದು ಹೇಳಿದ್ದಾರೆ.
ದಕ್ಷಿಣ ಆಫ್ರಿಕಾದ ಮೂಳೆ ತಜ್ಞ ಡಾ. ಫರ್ಗ್ಯೂಸನ್ ಅವರಲ್ಲಿ ಚಿಕಿತ್ಸೆ ಪಡೆದ ನಂತರ ಪಾದದ ತೊಂದರೆ ಕಡಿಮೆಯಾಗಿದೆ. ವೈದ್ಯರು ಸೂಚಿಸಿರುವ ಷೂಗಳನ್ನು ಧರಿಸುತ್ತಿದ್ದೇನೆ ತಮ್ಮ ಗಾಯ ಬಲವತ್ತರವಾದುದೇನೂ ಅಲ್ಲ . ಆದರೆ, ಬಲಪಾದದ ಹೆಬ್ಬೆಟ್ಟಿಗೆ ಇನ್ನೂ ಸ್ವಲ್ಪ ಕಾಲ ವಿಶ್ರಾಂತಿ ಬೇಕಾಗಿದೆ ಎಂದು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ತೆಂಡೂಲ್ಕರ್ ತಿಳಿಸಿದರು.
ಈ ನಡುವೆ, ಗುರುವಾರ ದಕ್ಷಿಣ ಆಫ್ರಿಕಾದಲ್ಲಿ ಹೇಳಿಕೆ ನೀಡಿರುವ ಡಾ.ಫರ್ಗ್ಯೂಸನ್ ಸೆಪ್ಟಂಬರ್ 18 ರಂದು ಲಂಡನ್ನಲ್ಲಿ ನಡೆಯುವ ಪ್ರದರ್ಶನ ಪಂದ್ಯದಲ್ಲಿ ಆಡಲು ತೆಂಡೂಲ್ಕರ್ ಸಮರ್ಥರಾಗಿರುತ್ತಾರೆ ಎಂದಿದ್ದಾರೆ. ಅಕ್ಟೋಬರ್ನಲ್ಲಿ ಪ್ರಾರಂಭವಾಗುವ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ತೆಂಡೂಲ್ಕರ್ ಆಡುತ್ತಾರೆ ಎಂದು ಕೂಡ ಅವರು ಹೇಳಿದರು.
(ಪಿಟಿಐ)