Get Updates
Get notified of breaking news, exclusive insights, and must-see stories!

ದಲಿತ ಮಹಿಳೆಯ ಬೆತ್ತಲೆ ಮೆರವಣಿಗೆ : ಪುಂಡುಗಂದಾಯ ಪರಿಶೀಲನೆ

ಬಳ್ಳಾರಿ : ದಲಿತ ಮಹಿಳೆಯನ್ನು ಬೆತ್ತಲೆಗೊಳಿಸಿ, ಮೆರವಣಿಗೆ ನಡೆಸುತ್ತಿದ್ದಾಗ, ಆ ಅಮಾನವೀಯ ಕೃತ್ಯವನ್ನು ತಡೆಯದೆ ನೋಡುತ್ತಾ ನಿಂತಿದ್ದ ಹಾಗೂ ಅಕೃತ್ಯಕ್ಕೆ ಕುಮ್ಮಕ್ಕು ನೀಡಿದ ಕಾರಣಕ್ಕಾಗಿ ವಣನೂರು ಗ್ರಾಮದಲ್ಲಿ ಪುಂಡುಗಂದಾಯ ವಿಧಿಸುವ ಬಗ್ಗೆ ರಾಜ್ಯ ಸರಕಾರ ಪರಿಶೀಲಿಸುತ್ತಿದೆ ಎಂದು ಗೃಹ ಸಚಿವ ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದಾರೆ.

ಈ ಘಟನೆಯಿಂದ ನೊಂದ ದಲಿತ ಕುಟುಂಬಕ್ಕೆ ಸಾಂತ್ವನ ಹೇಳಲು ವಿಶೇಷ ಹೆಲಿಕಾಪ್ಟರ್‌ನಲ್ಲಿ ಇಲ್ಲಿಗೆ ಆಗಮಿಸಿದ ಅವರು, ದೌರ್ಜನ್ಯಕ್ಕೊಳಗಾಗಿ ನೊಂದು, ಆಸ್ಪತ್ರೆ ಸೇರಿರುವ ಎರ್ರೆಮ್ಮಳನ್ನು ಭೇಟಿ ಮಾಡಿ ಸರಕಾರದ ಪರವಾಗಿ 50 ಸಾವಿರ ರುಪಾಯಿಗಳ ಚೆಕ್‌ ನೀಡಿದರು.

ಆನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಖರ್ಗೆ, ಇಂತಹ ಅಮಾನವೀಯ ಕೃತ್ಯ ಎಸಗಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ರಾಜ್ಯದಲ್ಲಿ ಇನ್ನು ಮುಂದೆ ಇಂತಹ ಘೋರ ಕೃತ್ಯ ನಡೆಯದಂತೆ ಕಟ್ಟೆಚ್ಚರವಹಿಸುವ ಭರವಸೆಯನ್ನೂ ಖರ್ಗೆ ನೀಡಿದರು.

ಯಾವ ಹಳ್ಳಿಯಲ್ಲಿ ಸಾಮಾಜಿಕ ದೌರ್ಜನ್ಯ ನಡೆಯುತ್ತದೋ, ಅಲ್ಲಿ ದೌಜ್ಯನ್ಯ ನಡೆಸಿದವರ ಮೇಲೆ ಪುಂಡುಗಂದಾಯ ಹೇರವ ಅವಕಾಶ ಕಾನೂನಿನಲ್ಲಿದೆ. ಈ ಬಗ್ಗೆ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು. ಇದು ಮನುಕುಲವೇ ತಲೆತಗ್ಗಿಸುವಂತಹ ಘೋರ ಕೃತ್ಯ. ಈಹೊತ್ತು ವಣನೂರಿನಲ್ಲಿ ಭೀತಿಯ ವಾತಾವರಣ ಇದೆ. ಹೀಗಾಗಿ ದಲಿತ ಕುಟುಂಬಕ್ಕೆ ಸೂಕ್ತ ಪೊಲೀಸ್‌ ರಕ್ಷಣೆ ನೀಡಲಾಗುವುದು ಎಂದರು.

ನ್ಯಾಯಾಂಗ ತನಿಖೆಗೆ ಒತ್ತಾಯ : ಇತ್ತೀಚೆಗೆ ವಣನೂರಿನಲ್ಲಿ ನಡೆದ ದಲಿತ ಮಹಿಳೆಯ ಬೆತ್ತಲೆ ಮೆರವಣಿಗೆಯನ್ನು ಖಂಡಿಸಿರುವ ಬಳ್ಳಾರಿ ಜಿಲ್ಲಾ ದಲಿತ ಸಂಘರ್ಷ ಸಮಿತಿ, ಈ ಪ್ರಕರಣದ ಬಗ್ಗೆ ನ್ಯಾಯಾಂಗ ತನಿಖೆ ನಡೆಸುವಂತೆ ಒತ್ತಾಯಿಸಿದೆ.

(ಪಿ.ಟಿ.ಐ/ಇನ್‌ಫೋವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+