ವಿಶ್ವಹಿಂದೂ ಪರಿಷತ್ನಿಂದ 30 ಸಾವಿರ ದೇವಸ್ಥಾನಗಳ ಪುನರುತ್ಥಾನ
ನವದೆಹಲಿ : ರಾಮಮಂದಿರ ನಿರ್ಮಾಣದ ನಂತರ ದೇಶದಲ್ಲಿ ದುಸ್ಥಿತಿಯಲ್ಲಿರುವ ಸುಮಾರು 30 ಸಾವಿರ ದೇವಸ್ಥಾನಗಳ ಪುನರುತ್ಥಾನ ಕಾರ್ಯವಿಶ್ವಹಿಂದೂ ಪರಿಷತ್ ವತಿಯಿಂದ ನಡೆಯಲಿದೆ ಎಂದು ಪರಿಷತ್ನ ಉಪಾಧ್ಯಕ್ಷ ಆಚಾರ್ಯ ಗಿರಿರಾಜ್ ಕಿಶೋರ್ ತಿಳಿಸಿದ್ದಾರೆ.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು, ರಾಮಮಂದಿರದ ಬಗ್ಗೆ ವಾಜಪೇಯಿ ಸರಕಾರ ಯಾವುದೇ ನಿಲುವುಗಳ ಹೊರತಾಗಿಯೂ ವಿಶ್ವಹಿಂದೂ ಪರಿಷತ್ ಮಂದಿರ ನಿರ್ಮಾಣ ಕಾರ್ಯವನ್ನು ಬರುವ ಮಾರ್ಚ್ನಲ್ಲಿ ಕೈಗೆತ್ತಿಕೊಳ್ಳಲಿದೆ ಎಂದು ಪುನರುಚ್ಚರಿಸಿದರು. ದೇಶದಲ್ಲಿ ಹಿಂದೆ ಹಾನಿಗೊಳಗಾಗಿದ್ದ ಸಾಕಷ್ಟು ದೇವಸ್ಥಾನಗಳು ಜೀರ್ಣೋದ್ಧಾರವನ್ನು ಕಾಣದೇ ದುಸ್ಥಿತಿಯಲ್ಲಿವೆ. ಅಂಥ 30 ಸಾವಿರ ದೇವಸ್ಥಾನಗಳನ್ನು ಪುನರುತ್ಥಾನ ಮಾಡುವುದು ಮಂದಿರ ನಿರ್ಮಾಣ ಕಾರ್ಯವನ್ನು ಮುಗಿದ ಬಳಿಕ ಪರಿಷತ್ ಕೈಗೆತ್ತಿಕೊಳ್ಳಲಿದೆ.
ಸರಕಾರವು ವಿವಾದಿತ ದೇವಸ್ಥಾನ ಎಂದು ಕೆಲವು ದೇವಾಲಯಗಳನ್ನು ಗುರುತಿಸಿದೆ. ಆದರೆ ವಿಶ್ವಹಿಂದೂ ಪರಿಷತ್ನ ದೇವಸ್ಥಾನಗಳ ಪುನರುತ್ಥಾನ ಕಾರ್ಯದಲ್ಲಿ ಇಂತಹ ದೇವಸ್ಥಾನಗಳೂ ಸೇರಿರುತ್ತವೆ. ಈ ಬಗ್ಗೆ ದೇಶಾದ್ಯಂತ ಇರುವ ಪರಿಷತ್ನ ಪ್ರಾದೇಶಿಕ ಘಟಕಗಳು ಕೆಲಸ ನಿರ್ವಹಿಸಲಿವೆ ಎಂದು ಕಿಶೋರ್ ಹೇಳಿದ್ದಾರೆ.
(ಪಿಟಿಐ)