Get Updates
Get notified of breaking news, exclusive insights, and must-see stories!

‘ಪ್ರಶಸ್ತಿಗಳನ್ನೆಲ್ಲ ಅಟ್ಟದ ಮೇಲೆ ಮಡಗಿವ್ನಿ’- ಸಾಲು ಮರದ ತಿಮ್ಮಕ್ಕ

ಬೆಂಗಳೂರು : ‘ಜಾಗ ಇಲ್ಲ ಅಂತ, ಪ್ಲಾಸ್ಟಿಕ್‌ ಚೀಲದಾಗೆ ಹಾಕಿ ಅಟ್ಟದ ಮೇಲೆ ಮಡಗಿವ್ನಿ’ ! ಸಾಲು ಮರದ ತಿಮ್ಮಕ್ಕ ತಮಗೆ ಬಂದಿರುವ ಪ್ರಶಸ್ತಿಗಳನ್ನು ಜೋಪಾನವಾಗಿರಿಸಿರುವ ಬಗೆಯನ್ನು ವಿವರಿಸಿದ್ದು ಹೀಗೆ.

ಕರ್ನಾಟಕ ರಾಜ್ಯ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಯ ನೌಕರರ ಕ್ರೀಡಾ ಮತ್ತು ಸಾಂಸ್ಕೃತಿಕ ಕ್ಷೇಮಾಭಿವೃದ್ಧಿ ಸಂಘ, ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸುವ ಕಾರ್ಯಕ್ರಮವನ್ನು ನಗರದಲ್ಲಿ ಮಂಗಳವಾರ ಹಮ್ಮಿಕೊಂಡಿತ್ತು . ಈ ಕಾರ್ಯಕ್ರಮದಲ್ಲಿ ಭಾಗವಹಿಸಿ, ಕರ್ನಾಟಕ ರಾಜ್ಯ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆ ನೌಕರರ ಪ್ರತಿಭಾನ್ವಿತ ಮಕ್ಕಳನ್ನು ಸನ್ಮಾನಿಸಿ ತಿಮ್ಮಕ್ಕ ಮಾತನಾಡಿದರು.

ನೀವು ಹುಡುಗ್ರು, ಮನೆ ಪಕ್ಕದಾಗೆ ಇಲ್ಲ ಇಸ್ಕೂಲ್‌ನಾಗೆ ಗಿಡ ಬೆಳಸಬೇಕು. ಯಾವ್ದಾದ್ರೂ ಒಂದೊಂದು ಗಿಡ ಬೆಳಸ್ಬೇಕು ಎಂದು ವಿದ್ಯಾರ್ಥಿಗಳಿಗೆ ತಿಮ್ಮಕ್ಕ ಕರೆ ನೀಡಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಆರೋಗ್ಯ ಸಚಿವ ಡಾ.ಎ.ಬಿ.ಮಲಕರೆಡ್ಡಿ ಜೀವನದಲ್ಲಿ ಮನರಂಜನೆ ಅಗತ್ಯ. ಆದರೆ, ಮನರಂಜನೆಯೇ ಜೀವನದ ಉದ್ದೇಶವಾಗಬಾರದು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶಕ ಡಾ.ಜಿ.ವಿ.ನಾಗರಾಜ್‌, ಇಲಾಖೆಯ ಮುಖ್ಯ ಆಡಳಿತಾಧಿಕಾರಿ ಕೆ.ಆರ್‌.ರಾಮಕೃಷ್ಣ, ಸಂಘದ ಅಧ್ಯಕ್ಷ ಎ.ಪುಟ್ಟಸ್ವಾಮಿ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಬಾಲಂಗೋಚಿ: ಕಾರ್ಯಕ್ರಮದಲ್ಲಿ ಪ್ರಶಸ್ತಿಪತ್ರ ನೀಡಿ ತಿಮ್ಮಕ್ಕ ಅವರನ್ನು ಸನ್ಮಾನಿಸಲಾಯಿತು. ಅಲ್ಲಿಗೆ ತಿಮ್ಮಕ್ಕನವರ ಚೀಲಕ್ಕೆ ಮತ್ತೊಂದು ಸರಕು ಸಿಕ್ಕಂತಾಯಿತು!

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+