ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಪುತ್ತೂರು ಸಮೀಪ ಒಂದೇ ಕುಟುಂಬದ ನಾಲ್ವರು ಕೆರೆಗೆ ಹಾರಿ ಆತ್ಮಹತ್ಯೆ
ಪುತ್ತೂರು: ಇಲ್ಲಿನ ಕುದ್ಮಾರು ಗ್ರಾಮದ ಬರೆಪ್ಪಾಡಿಯಲ್ಲಿ ಒಂದೇ ಕುಟುಂಬದ ನಾಲ್ವರು ಸದಸ್ಯರು ಕೆರೆಗೆ ಹಾರಿ ಆತ್ಮ ಹತ್ಯೆ ಮಾಡಿಕೊಂಡ ದುರಂತ ಸಂಭವಿಸಿದೆ.
ಕಾಣಿಯೂರು- ಪುತ್ತೂರಿನ ಟೂರಿಸ್ಟ್ ಕಾರ್ ಚಾಲಕ ರಾಧಾಕೃಷ್ಣ ಗೌಡ (39), ಅವರ ಪತ್ನಿ ಶೋಭಾ(27), ಮಕ್ಕಳಾದ ಪ್ರೀತಿಕಾ(6), ಮತ್ತು ಪ್ರಿಯಾಂಕಾ(4) ಎಂಬವರು ಆತ್ಮಹತ್ಯೆ ಮಾಡಿಕೊಂಡ ದುರ್ದೈವಿಗಳೆಂದು ಗುರುತಿಸಲಾಗಿದೆ.
ಸೋಮವಾರ ಬೆಳಗ್ಗೆೋಟದ ಕೆರೆಯಲ್ಲಿ ನಾಲ್ವರ ಶವ ಪತ್ತೆಯಾಗಿದ್ದು ಕೀಟನಾಶಕದ ಬಾಟಲಿಯಾಂದನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ವಿಷ ಸೇವಿಸಿದ ಬಳಿಕ ನಾಲ್ಕು ಮಂದಿ ಕೆರೆಗೆ ಹಾರಿರಬೇಕು ಎಂದು ಶಂಕಿಸಲಾಗಿದೆ. ಈ ಸಾಮೂಹಿಕ ಆತ್ಮ ಹತ್ಯೆಗೆ ಕಾರಣ ಸ್ಪಷ್ಟವಾಗಿಲ್ಲದಿದ್ದರೂ ಗುಣಪಡಿಸಲಾಗದ ತೀವ್ರ ರೋಗವೇ ಘಟನೆಗೆ ಕಾರಣ ಎಂದು ಅಂದಾಜು ಮಾಡಲಾಗಿದೆ.
(ಇನ್ಫೋ ವಾರ್ತೆ)
Comments
Story first published: Tuesday, August 28, 2001, 0:00 [IST]