ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಸೈಬರ್ ಕ್ರೆೃಂ ವಿಚಾರಣಾ ಠಾಣೆ ವಾರದಲ್ಲಿ ಕಾರ್ಯಾರಂಭ- ಕೃಷ್ಣ
ಬೆಂಗಳೂರು: ಸೈಬರ್ ಅಪರಾಧಗಳ ವಿಚಾರಣೆಗಾಗಿ ಪ್ರತ್ಯೇಕ ಠಾಣೆಯಾಂದನ್ನು ರಾಜ್ಯದಲ್ಲಿ ಸ್ಥಾಪಿಸಲಾಗುತ್ತಿದ್ದು , ಇನ್ನೊಂದು ವಾರದಲ್ಲಿ ಈ ಠಾಣೆ ಕಾರ್ಯಾರಂಭ ಮಾಡುವುದು ಎಂದು ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಮಂಗಳವಾರ ಘೋಷಿಸಿದರು.
ಏಷ್ಯಾ ಅಭಿವೃದ್ಧಿ ಬ್ಯಾಂಕ್ ಏರ್ಪಡಿಸಿದ್ದ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದ ಅವರು, ನಗರದಲ್ಲಿ ಇತ್ತೀಚೆಗೆ ಹೆಚ್ಚಿನ ಸಂಖ್ಯೆಯಲ್ಲಿ ಸಂಭವಿಸುತ್ತಿರುವ ಅಪರಾಧಗಳಿಂದ ಸಾಮಾನ್ಯ ನಾಗರಿಕ ಗಾಬರಿಗೊಂಡಿದ್ದಾನೆ. ಅಪರಾಧಗಳನ್ನು ತಡೆಗಟ್ಟಲು ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದರು.
ಮುಖ್ಯಮಂತ್ರಿಗಳ ಮಾತುಗಳಲ್ಲಿ ಬೆಂಗಳೂರು ಅಪರಾಧ ನಗರಿಯಾಗುತ್ತಿರುವ ಕುರಿತು ಆತಂಕ, ಕಾಳಜಿ ವ್ಯಕ್ತವಾಗಿತ್ತು. ಅಪರಾಧಿಗಳ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳುವುದಾಗಿ ಅವರು ಎಚ್ಚರಿಸಿದರು. ರಾಜಧಾನಿಯಲ್ಲಿನ ಅಪರಾಧಗಳ ಸಂಖ್ಯೆ ಹೆಚ್ಚಳದ ಬಗೆಗೆ ಮುಖ್ಯಮಂತ್ರಿಗಳು ಪ್ರತಿಕ್ರಿಯೆ ನೀಡುತ್ತಿರುವುದು ಇದೇ ಮೊದಲೆನ್ನುವುದು ಗಮನಾರ್ಹ.
(ಇನ್ಫೋ ವಾರ್ತೆ)
Comments
Story first published: Tuesday, August 28, 2001, 0:00 [IST]