ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಳೇ ಹುಬ್ಬಳ್ಳಿಯಲ್ಲಿ ನಾಗಪ್ಪ ಮಾರಡಗಿ ಮೆರವಣಿಗೆ

By Staff
|
Google Oneindia Kannada News

ಹುಬ್ಬಳ್ಳಿ : ವೀರಪ್ಪನ್‌ ಬಂಧನದಿಂದ ತಪ್ಪಿಸಿಕೊಂಡು ಬಂದು ಸುದ್ದಿ ಮಾಡಿದ ನಾಗಪ್ಪ ಮಾರಡಗಿ ಹಳೆಯ ಹುಬ್ಬಳ್ಳಿಯಲ್ಲಿ ಸೋಮವಾರ ಮನೆಮಾತು. ಹುಬ್ಬಳ್ಳಿಯ ಗಜಾನನ ಮಹಾಮಂಡಲ ಈತನನ್ನು ಕೂರಿಸಿದ್ದು ಉಪ್ಪರಿಗೆ ಮೇಲೆ.

ನಾಗಪ್ಪ ಅವರನ್ನು ಬೀದಿ ತುಂಬೆಲ್ಲಾ ಮೆರವಣಿಗೆ ಮಾಡಿ, ಸಾಯಿ ಮಂದಿರದಲ್ಲಿ ಪತ್ನಿ ಸಮೇತ ಸನ್ಮಾನಿಸಿ, ಜೈಕಾರ ಹಾಕಿದರು. ಕೆಲವು ಮಾಧ್ಯಮಗಳ ಪ್ರತಿನಿಧಿಗಳೊಡನೆ ಮಾತನಾಡಿದ ಮಾರಡಗಿ ಕುಟುಂಬದವರು, ಈಗ ತಮ್ಮ ಆರ್ಥಿಕ ಪರಿಸ್ಥಿತಿ ತೀರಾ ಹದಗೆಟ್ಟಿದೆ ಎಂದರು. ವಿವಿಧ ಸೇವಾ ಸಂಸ್ಥೆಗಳು ನಾಗಪ್ಪ ಮಾರಡಗಿ ಕುಟುಂಬಕ್ಕೆ ಸಹಾಯ ಮಾಡಲು ನಿಧಿ ಸಂಗ್ರಹಿಸುತ್ತಿರುವುದನ್ನೂ ಒಪ್ಪಿಕೊಂಡರು.

ಸಂಸದರ ಪರಿಹಾರ ನಿಧಿಯಿಂದ 2 ಲಕ್ಷ ರುಪಾಯಿ ಹಾಗೂ ಹುಬ್ಬಳ್ಳಿಯಲ್ಲಿ ಒಂದು ಗೃಹ ನಿವೇಶನವನ್ನು ನಾಗಪ್ಪ ಮಾರಡಗಿ ಅವರಿಗೆ ಮಂಜೂರು ಮಾಡಿಸಲು ಬಿಜೆಪಿ ಮುಖಂಡ ಹಾಗೂ ಸಂಸದ ವಿಜಯ ಸಂಕೇಶ್ವರ್‌ ಒಪ್ಪಿದ್ದಾರೆ ಎಂದು ಗಜಾನನ ಮಹಾಮಂಡಲದ ಕಾರ್ಯದರ್ಶಿ ಡಿ.ಗೋವಿಂದ ರಾವ್‌ ತಿಳಿಸಿದರು.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X