ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

5 ಕೋಟಿ ಸಸಿ ನೆಡುವ ಯೋಜನೆಗೆ ಮುಖ್ಯಮಂತ್ರಿಗಳಿಂದ ಚಾಲನೆ

By Staff
|
Google Oneindia Kannada News

ತುಮಕೂರು : ಕುಣಿಗಲ್‌ ತಾಲ್ಲೂಕಿನ ಹುಲಿಯೂರು ದುರ್ಗ ಕ್ಷೇತ್ರದಲ್ಲಿ 5 ಕೋಟಿ ಸಸಿ ನೆಡುವ ವನ ವಿಕಾಸ ಯೋಜನೆಯ ಉದ್ಘಾಟನೆಯಾಗಿದೆ. ಹುಲಿಯೂರು ದುರ್ಗ- ಮದ್ದೂರು ರಾಜ್ಯ ಹೆದ್ದಾರಿಯನ್ನು 16 ಕೋಟಿ ರುಪಾಯಿ ವೆಚ್ಚದಲ್ಲಿ ಮೇಲ್ದರ್ಜೆಗೇರಿಸುವ ರಸ್ತೆ ಕಾಮಗಾರಿಗೂ ಶುಕ್ರವಾರ ಚಾಲನೆ ದೊರೆತಿದೆ. ಈ ಎರಡೂ ಒಳ್ಳೆ ಕೆಲಸಗಳನ್ನು ವಿಧ್ಯುಕ್ತವಾಗಿ ಪ್ರಾರಂಭಿಸಿದ್ದು ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ .

ಅಂತರರಾಜ್ಯ ಒಪ್ಪಂದದ ಪ್ರಕಾರ ತಮಿಳುನಾಡಿಗೆ ನೀರು ಬಿಡಬೇಕು ನಿಜ. ಆದರೆ ಜಲಾಶಯಗಳು ನೀರಿಲ್ಲದೆ ಬತ್ತಿಹೋಗಿರುವುದರಿಂದ, ಕುರುವೈ ಬೆಳೆಗೆ ನೀರು ಬಿಡುವುದಾದರೂ ಹೇಗೆ? ಜಲಾಶಯಗಳು ತುಂಬಿದಲ್ಲಿ ತಮಿಳುನಾಡು ಮತ್ತು ಕರ್ನಾಟಕದ ನಡುವಿನ ನೀರಿನ ಸಮಸ್ಯೆಗೆ ಪೂರ್ಣವಿರಾಮ ದೊರೆಯಲಿದೆ. ಕೈಕೊಟ್ಟ ಮುಂಗಾರು ರಾಜ್ಯದಲ್ಲಿ ಬರ ಪರಿಸ್ಥಿತಿ ಹುಟ್ಟುಹಾಕಿದೆ. ಋತುಮಾನ ಒಂದೇ ರೀತಿ ಇರುವುದಿಲ್ಲ. ಬಂದೇ ಬರತಾವ ಕಾಲ. ನಾವು ಎಲ್ಲಾ ಪರಿಸ್ಥಿತಿ ಎದುರಿಸಲು ಸಜ್ಜಾಗಬೇಕು ಎಂದರು.

ಧರ್ಮ ಗುರುಗಳು ಗಿಡಗಳನ್ನು ಬೆಳೆಸಲು ದೀಕ್ಷೆ ತೊಟ್ಟಿರುವುದನ್ನು ಬಾಯಿತುಂಬಾ ಹೊಗಳಿದ ಕೃಷ್ಣ, ಹೇಮಾವತಿ ನಾಲೆ ಕಾಮಗಾರಿಯನ್ನು ಕ್ಷಿಪ್ರ ಗತಿಯಲ್ಲಿ ಪೂರೈಸಲು ಸೂಚಿಸಿದರು.

(ಇನ್ಫೋ ವಾರ್ತೆ)

ವಾರ್ತಾ ಸಂಚಯ
ಮುಖಪುಟ / ಕೃಷ್ಣಗಾರುಡಿಯ ಕನ್ನಡಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X