ಐಟಿ ಸಚಿವರ ಮೂಲಕ ಲೋಕಸಭೆಗೆ ಲ್ಯಾಪ್ಟಾಪ್ ಪದಾರ್ಪಣ
ನವದೆಹಲಿ : ಆಯವ್ಯಯವನ್ನು ಮಂಡಿಸುವ ಸಂದರ್ಭದಲ್ಲಿ , ಕಡತಗಳನ್ನೊಳಗೊಂಡ ಸೂಟ್ಕೇಸ್ ಹಿಡಿದ ಹಣಕಾಸು ಸಚಿವರು ಪಾರ್ಲಿಮೆಂಟ್ ಪ್ರವೇಶಿಸುವುದನ್ನು ನೀವೆಲ್ಲ ನೋಡಿ ಬಲ್ಲಿರಿ. ಅವರು ಲ್ಯಾಪ್ಟಾಪ್ ಯಾಕೆ ಬಳಸಬಾರದು?
ಆ ದಿನ ದೂರವಿಲ್ಲ ಎನಿಸುತ್ತೆ. ಅದಕ್ಕೆ ಪೂರ್ವಭಾವಿಯೋ ಎನ್ನುವಂತೆ- ಇದೇ ಮೊದಲಬಾರಿಗೆ ಸಚಿವರೊಬ್ಬರು ಲೋಕಸಭೆಯಲ್ಲಿ ಶುಕ್ರವಾರ ಲ್ಯಾಪ್ಟಾಪ್ ಬಳಸಿದರು. ಈ ಮೂಲಕ ಸಂಸತ್ತಿಗೆ ಲ್ಯಾಪ್ಟಾಪ್ ಕಾಲಿರಿಸಿದಂತಾಯಿತು. ಈ ಅಗ್ಗಳಿಕೆ ಸಂಸದೀಯ ವ್ಯವಹಾರಗಳ ಸಚಿವ ಪ್ರಮೋದ್ ಮಹಾಜನ್ ಅವರದು.
ಆಗಸ್ಟ್
31
ರಂದು
ಕೊನೆಗೊಳ್ಳುವ
ಮಾನ್ಸೂನ್
ಅಧಿವೇಶನದ
ಉಳಿದ
ಭಾಗದ
ಬಗೆಗಿನ
ವಿವರಗಳನ್ನು
ಪ್ರಮೋದ್
ಮಹಾಜನ್
ಲ್ಯಾಪ್ಟಾಪ್
ಬಳಸಿ
ವಿವರಿಸಿದಾಗ,
ಸದನದಲ್ಲಿದ್ದ
ಸಂಸದರಿಗೆಲ್ಲ
ಅಚ್ಚರಿ.
ಸದನದ
ಅಧ್ಯಕ್ಷ
ಜಿಎಂಸಿ
ಬಾಲಯೋಗಿ
ಅವರು
ಮಹಾಜನ್
ಅವರು
ಮಾಹಿತಿ
ಮತ್ತು
ತಂತ್ರಜ್ಞಾನ
ಸಚಿವರೂ
ಆಗಿರುವುದನ್ನು
ಸದನದ
ಗಮನಕ್ಕೆ
ತಂದರು.
ಇದೇ
ಸಂದರ್ಭದಲ್ಲಿ
ಸಂಸತ್ತಿನ
ಪ್ರತಿಯಾಬ್ಬ
ಸದಸ್ಯರಿಗೂ
ಲ್ಯಾಪ್ಟಾಪ್
ನೀಡುವಂತೆ
ಕಾಂಗ್ರೆಸ್ಸಿನ
ಎ.ಸಿ.ಜೋಸ್
ಸೂಚಿಸಿದರು.
ಬಾಲಂಗೋಚಿ
:ಲ್ಯಾಪ್ಟಾಪ್
ಎಂದರೇನು
ಎಂದು
ಯಾವ
ಸದಸ್ಯರೂ
ಕೇಳಿದ್ದು
ವರದಿಯಾಗಿಲ್ಲ
ದೇಶದ
ಸಾಕ್ಷರತೆಯ
ಪ್ರಮಾಣ
ಶೇ.65.38
2001
ನೇ
ಜನಗಣತಿಯ
ಮಾಹಿತಿಯ
ಪ್ರಕಾರ
ದೇಶದಲ್ಲಿ
ಅಕ್ಷರಸ್ಥರ
ಪ್ರಮಾಣ
ಪ್ರತಿಶತ
65.38
ರಷ್ಟಿದೆ
ಎಂದು
ವಿಜ್ಞಾನ
ಮತ್ತು
ತಂತ್ರಜ್ಞಾನ
ಖಾತೆಯ
ರಾಜ್ಯ
ಸಚಿವ
ಬಚಿಸಿಂಗ್
ರಾವತ್
ಲಿಖಿತ
ಹೇಳಿಕೆಯ
ಮೂಲಕ
ರಾಜ್ಯಸಭೆಯಲ್ಲಿ
ತಿಳಿಸಿದರು.
(ಪಿಟಿಐ)
ವಾರ್ತಾ
ಸಂಚಯ
ಮುಖಪುಟ
/
ಕರ್ನಾಟಕ
ಸಿಲಿಕಾನ್
ಕಣಿವೆ