ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಕಡಲನಗರಿಯಲ್ಲಿ ಆ.25ರಿಂದ ನರ್ಸಿಂಗ್ ಕುರಿತ ರಾಷ್ಟ್ರೀಯ ಸಮ್ಮೇಳನ
ಮಂಗಳೂರು : ಶುಶ್ರೂಷೆ (ನರ್ಸಿಂಗ್) ಕುರಿತಾದ ಮೂರು ದಿನಗಳ ರಾಷ್ಟ್ರೀಯ ಸಮ್ಮೇಳನ ಆಗಸ್ಟ್ 25 ರಿಂದ ಕಡಲ ನಗರಿಯಲ್ಲಿ ನಡೆಯಲಿದೆ. ಭಾರೀ ಪ್ರಮಾಣದ ದುರಂತಗಳು ಸಂಭವಿಸಿದ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯ ಸಂತ್ರಸ್ತರನ್ನು ಸಂತೈಸುವ ಕುರಿತು ಶುಶ್ರೂಷಕರಿಗೆ ತರಬೇತಿ ನೀಡುವ ಉದ್ದೇಶವನ್ನು ಈ ಸಮ್ಮೇಳನ ಹೊಂದಿದೆ.
ಸಮ್ಮೇಳನವನ್ನು ಸಂಯೋಜಿಸಿರುವ ಫಾದರ್ ಮುಲ್ಲರ್ ನರ್ಸಿಂಗ್ ಕಾಲೇಜು ತನ್ನ ಮಾಧ್ಯಮ ಪ್ರಕಟಣೆಯಲ್ಲಿ ಈ ವಿಷಯವನ್ನು ತಿಳಿಸಿದೆ. ಕರ್ನಾಟಕ ಸೇರಿದಂತೆ, ತಮಿಳುನಾಡು, ಕೇರಳ ಹಾಗೂ ಮಹಾರಾಷ್ಟ್ರದ ಅತಿಥಿಗಳು ಸಮ್ಮೇಳನದಲ್ಲಿ ಭಾಗವಹಿಸುವರು. ರಾಜೀವ್ಗಾಂಧಿ ವಿಶ್ವ ವಿದ್ಯಾಲಯ (ಆರೋಗ್ಯ ವಿಜ್ಞಾನ)ದ ರಿಜಿಸ್ಟ್ರಾರ್ ಡಾ.ಕೆ.ಎಂ.ಶ್ರೀನಿವಾಸ ಗೌಡ ಸಮ್ಮೇಳನವನ್ನು ಉದ್ಘಾಟಿಸುವರು ಎಂದು ಪ್ರಕಟಣೆ ತಿಳಿಸಿದೆ.
(ಪಿಟಿಐ)
Story first published: Thursday, August 23, 2001, 0:00 [IST]