ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಬೀದರ್ ಜಿಲ್ಲೆಯಲ್ಲಿ ಶೀಘ್ರದಲ್ಲೇ ಕೃಷಿ ವಿಮಾ ಪಾಲಿಸಿ- ಎಸ್.ಎಂ.ಕೃಷ್ಣ
ಬೀದರ್: ರೈತರು ಎದುರಿಸುತ್ತಿರುವ ಆತಂಕದ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಕೃಷಿ ವಿಮಾ ಪಾಲಿಸಿಯನ್ನು ಬೀದರ್ ಜಿಲ್ಲೆಗೆ ಶೀಘ್ರದಲ್ಲೇ ಪರಿಚಯಿಸಲಾಗುವುದು ಎಂದು ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಪ್ರಕಟಿಸಿದ್ದಾರೆ.
ವಿಶ್ವಬ್ಯಾಂಕ್ ನೆರವಿನಿಂದ ನಡೆಯುತ್ತಿರುವ ಕುಡಿಯುವ ನೀರಿನ ಯೋಜನೆಯ ಅನಿಯಮಿತ ಕಾಮಗಾರಿಗಳ ಕುರಿತಂತೆ ಸಿಓಡಿ ತನಿಖೆ ನಡೆಸುವುದಾಗಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಮುಖ್ಯಮಂತ್ರಿ ಕೃಷ್ಣ ಭರವಸೆ ನೀಡಿದರು.
ಕಾರಂಜಾ ನೀರಾವರಿ ಯೋಜನೆ ಹಾಗೂ ಬೀದರ್-ಶ್ರೀರಂಗಪಟ್ಟಣ ಹೆದ್ದಾರಿಯಂತಹ ಪ್ರಮುಖ ಯೋಜನೆಗಳ ಕಾಮಗಾರಿಗಳನ್ನು ಚುರುಕುಗೊಳಿಸುವುದಾಗಿ ಕೃಷ್ಣ ಹೇಳಿದರು.
(ಪಿಟಿಐ)
Story first published: Thursday, August 23, 2001, 0:00 [IST]