Get Updates
Get notified of breaking news, exclusive insights, and must-see stories!

ಮುತ್ತತ್ತಿ ಅರಣ್ಯದಲ್ಲಿ ವೀರಪ್ಪನ್‌ ಶಂಕೆ : ಪೊಲೀಸರ ಕಟ್ಟೆಚ್ಚರ

ಚಾಮರಾಜನಗರ : ಕುಖ್ಯಾತ ಕಾಡುಗಳ್ಳ, ನರಹಂತಕ ವೀರಪ್ಪನ್‌ ಈಹೊತ್ತು ಮಂಡ್ಯಜಿಲ್ಲೆಯ ಮುತ್ತತ್ತಿ ಅರಣ್ಯ ಪ್ರದೇಶದಲ್ಲಿದ್ದಾನೆ ಎಂಬ ವದಂತಿಗಳು ಹಬ್ಬಿವೆ. ಈ ಹಿನ್ನೆಲೆಯಲ್ಲಿ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ಮಳವಳ್ಳಿ, ಹಲಗೂರು ಹಾಗೂ ಭಾರತೀನಗರ ರಾಣೆಯ ಪೊಲೀಸ್‌ ಸಿಬ್ಬಂದಿಯನ್ನೂ ಅರಣ್ಯಕ್ಕೆ ಕಳುಹಿಸಲಾಗಿದೆ ಎಂಬ ವರ್ತಮಾನ ಬಂದಿದೆ.

ಈ ಮಧ್ಯೆ ವೀರಪ್ಪನ್‌ ಹಾಗೂ ಆತನ ಸಹಚರರನ್ನು ಬಂಧಿಸಲು ನೇಮಿಸಲಾಗಿರುವ ಐ.ಪಿ.ಎಸ್‌. ಕೆಂಪಯ್ಯ ನೇತೃತ್ವದ ಕಾರ್ಯಪಡೆ ಮಂಗಳವಾರ ಬೆಳಗ್ಗೆಯಿಂದ ಸಂಜೆಯವರೆಗೆ ಸತ್ಯಮಂಗಲದಿಂದ ಮೆಟ್ಟೂರಿನವರೆಗೆ ತೀವ್ರ ಸಂಚಾರ ನಡೆಸಿ, ಕುತೂಹಲ ಕೆರಳಿಸಿದೆ.

ಈ ದಿಢೀರ್‌ ಕಾರ್ಯಾಚರಣೆ ನಾನಾ ಊಹಾಪೋಹಗಳಿಗೆ ಎಡೆಮಾಡಿಕೊಟ್ಟಿದೆ. ಆದರೆ, ವೀರಪ್ಪನ್‌ ಸತ್ಯಮಂಗಲದಲ್ಲಿದ್ದಾನೋ, ಮುತ್ತತ್ತಿಯಲ್ಲಿದ್ದಾನೋ ಅಥವಾ ಮಲೆ ಮಹದೇಶ್ವರ ಬೆಟ್ಟದಲ್ಲೇ ಅಡಗಿದ್ದಾನೆ ಎಂಬುದು ನಿಗೂಢವಾಗಿದೆ.

ಆದರೆ, ಮಹದೇಶ್ವರ ಬೆಟ್ಟದಿಂದ ಉತ್ತರ ದಿಕ್ಕಿನ ಅರಣ್ಯಕ್ಕೆ ವೀರಪ್ಪನ್‌ ಹಾಗೂ ಆತನ ಸಹಚರರು ಹೋಗಿರುವ ಬಗ್ಗೆ ಖಚಿತ ವರ್ತಮಾನ ದೊರೆತಿರುವ ಹಿನ್ನೆಲೆಯಲ್ಲಿ ಕೆಂಪಯ್ಯ ಅವರ ನೇತೃತ್ವದ ಕಾರ್ಯಪಡೆ ಕ್ಷಿಪ್ರ ಕಾರ್ಯಾಚರಣೆ ಕೈಗೊಂಡಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. ಗೌರಿ ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಅರಣ್ಯ ಗಡಿಯಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ.
More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+