ವಿಶ್ವೇಶ್ವರಯ್ಯ ನಾಲೆ ಒಡೆದು 40 ಎಕರೆ ಕೃಷಿ ಜಮೀನು ಜಲಾವೃತ
ಮಂಡ್ಯ : ಪಾಂಡವಪುರ ಸಮೀಪದ ಬೇವಿನಕುಪ್ಪೆ ಗ್ರಾಮದ ಬಳಿ ವಿಶ್ವೇಶ್ವರಯ್ಯ ನಾಲೆ ಒಡೆದು, ಅಧಿಕ ಪ್ರಮಾಣದ ನೀರು ನುಗ್ಗಿದ್ದರಿಂದ ಪಾಂಡವಪುರ ಕೆರೆ ಏರಿಯೂ ಒಡೆದು ಕೆರೆಯಲ್ಲಿದ್ದ ಮೀನು ಹಾಗೂ ಲಕ್ಷಾಂತರ ರೂಪಾಯಿಯ ಭತ್ತ ಮತ್ತು ಕಬ್ಬು ಬೆಳೆ ನಾಶವಾಗಿದೆ.
ಸೋಮವಾರ ಬೆಳಗ್ಗೆ ಬೇವಿನ ಕುಪ್ಪೆ ಮೇಲು ಸೇತುವೆಯ ಏರಿ ಒಡೆದು, ನೀರು ಹಳೆಯ ಮೇಲು ಸೇತುವೆಯಡಿಯಲ್ಲಿ ಹರಿದು, ಅದರ ಪಕ್ಕದಲ್ಲಿದ್ದ ಸುಮಾರು 150 ಎಕರೆ ಪ್ರದೇಶದ ಜಮೀನು ಮುಳುಗಿದೆ. ಪಾಂಡವಪುರದ ಈರೋಡೆ ಕೆರೆಗೂ ನೀರು ನುಗ್ಗಿದ ಪರಿಣಾಮ ಕೆರೆಯ ಏರಿ ಒಡೆದು ಹೋಗಿದೆ.
ವಿಶ್ವೇಶ್ವರಯ್ಯ ನಾಲಾ ಅಚ್ಚುಕಟ್ಟು ಪ್ರದೇಶದ ಸುಮಾರು 40 ಎಕರೆ ಜಮೀನು ಜಲಾವೃತವಾಗಿದೆ. ನಾಲೆಯಲ್ಲಿ ನೀರಿನ ಹರಿವಿನ ವೇಗ ಹೆಚ್ಚಾಗಿರುವುದರಿಂದ ನಾಲೆ ಒಡೆದಿದೆ ಎಂದು ಹೇಳಲಾಗಿದೆ. 1997-98ರ ಅವಧಿಯಲ್ಲಿ ನಾಲೆಯನ್ನು ಶಕ್ತಿಯುತಗೊಳಿಸಲು ಎಂಬ್ಯಾಕ್ಮೆಂಟನ್ನು ಕಟ್ಟಲಾಗಿತ್ತು. ಆದರೆ ಅದರ ಪಕ್ಕದಲ್ಲಿಯೇ 35 ಮೀಟರ್ನಷ್ಟು ನಾಲೆ ಒಡೆದಿದೆ. ಈರೋಡೆ ಕೆರೆ ಏರಿ ಸುಮಾರು 50 ಮೀಟರ್ನಷ್ಟು ಉದ್ದಕ್ಕೆ ಒಡೆದಿದೆ. ಹೊಲಗದ್ದೆಗಳನ್ನು ಮುಳುಗಿಸಿದ ನೀರು ಬಾಬುರಾಯನ ಕೊಪ್ಪ ದ ಬಳಿ ಮತ್ತೆ ನಾಲೆಯನ್ನು ಸೇರುತ್ತಿದೆ.
ಕೃಷ್ಣ ರಾಜ ಸಾಗರದಿಂದ ವಿಶ್ವೇಶ್ವರಯ್ಯ ನಾಲೆಗೆ ನೀರು ಬಿಡುವುದನ್ನು ತಕ್ಷಣವೇ ನಿಲ್ಲಿಸಲಾಗಿದೆ. ಜಿಲ್ಲಾಧಿಕಾರಿ ಎಲ್. ಕೆ. ಅತೀಕ್, ಕೇಂದ್ರ ಸ್ಥಾನಿಕ ಸಹಾಯಕ ಶಂಕರಪ್ಪ, ಮತ್ತಿತರ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ.
(ಇನ್ಫೋ ವಾರ್ತೆ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications