ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಾವಣಗೆರೆ:ಗೋಡೆ ಕುಸಿದು ನಿದ್ರಿಸುತ್ತಿದ್ದ ಐವರ ದುರ್ಮರಣ

By Staff
|
Google Oneindia Kannada News

ದಾವಣಗೆರೆ : ಇಲ್ಲಿಗೆ 50 ಕಿಮೀ ದೂರದ ಬಸವಪಟ್ಟಣದ ಸಮೀಪ ಮನೆಯ ಗೋಡೆ ಕುಸಿದು, ನಿದ್ರಿಸುತ್ತಿದ್ದ 5 ಮಂದಿ ಸ್ಥಳದಲ್ಲೇ ದುರ್ಮರಣಕ್ಕೀಡಾದ ಘಟನೆ ಮಂಗಳವಾರ ಬೆಳಗ್ಗೆ ಸಂಭವಿಸಿದೆ. ಸೋಮವಾರ ಸುರಿದ ಸತತ ಮಳೆಯಿಂದಾಗಿ ಮನೆಯ ಗೋಡೆಗಳು ಜಖಂಗೊಂಡಿದ್ದವು.

ಹನುಮಂತ ಬೋವಿ, ಆತನ ಪತ್ನಿ ಸಂಕಮ್ಮ , ಮಗಳು ಶ್ರುತಿ, ಮಗಳು ಹಾಲೇಶಿ ಹಾಗೂ ಯಲ್ಲಮ್ಮ ಗೋಡೆಯಡಿ ಸಿಕ್ಕು ಮೃತರಾದ ದುರ್ದೈವಿಗಳು. ಪ್ರಕರಣದ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ದಾವಣಗೆರೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಪಾರ್ವತಮ್ಮ ಅವರು ದುರ್ಘಟನೆ ಕುರಿತು ಅತೀವ ಶೋಕ ವ್ಯಕ್ತಪಡಿಸಿದ್ದಾರೆ.

(ಪಿಟಿಐ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X