ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ವೆಬ್ಸೈಟ್ ಮೂಲಕ ‘ಭಾಗವತ’ ಕುರಿತ ಭಾಷಣ ಪ್ರಸಾರ
ಬೆಂಗಳೂರು : ಶ್ರೀಮನ್ಮಹಾಭಾರತ ಸಂಶೋಧನಾ ಪ್ರತಿಷ್ಠಾನಮ್ ಕತ್ತರಿಗುಪ್ಪೆಯ ವಿದ್ಯಾಪೀಠ ವೃತ್ತದ ಬಳಿ ಇರುವ ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ ಸೋಮವಾರದಿಂದ (ಆ.20) ಸೆಪ್ಟೆಂಬರ್ 2ನೇ ತಾರೀಖಿನವರೆಗೆ ಭಾಗವತ ಕುರಿತು ಉಪನ್ಯಾಸ ಮಾಲೆಯನ್ನು ಏರ್ಪಡಿಸಿದೆ.
ಖ್ಯಾತ ಸಂಸ್ಕೃತ ವಿದ್ವಾಂಸರಾದ ಡಾ. ವಿ. ಪ್ರಭಂಜನಾಚಾರ್ಯರು ಭಾಗವತದ ಬಗ್ಗೆ ಉಪನ್ಯಾಸ ನೀಡಲಿದ್ದಾರೆ. ಈ ಕಾರ್ಯಕ್ರಮವನ್ನು ಉಡುಪಿಯ ಫಲಿಮಾರು ಮಠದ ಶ್ರೀ ವಿದ್ಯಾಧೀಶತೀರ್ಥ ಸ್ವಾಮಿಗಳು ಸೋಮವಾರ ಬೆಳಗ್ಗೆ ಉದ್ಘಾಟಿಸಿದರು.
ಸೆಪ್ಟೆಂಬರ್ 2ರಂದು ಸಮಾರೋಪ ಸಮಾರಂಭ ನಡೆಯಲಿದ್ದು, ಅಂದು ಕೇಂದ್ರ ಪ್ರವಾಸೋದ್ಯಮ ಸಚಿವ ಅನಂತಕುಮಾರ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುತ್ತಿದ್ದಾರೆ. ಇದೆ ಮೊಟ್ಟ ಮೊದಲ ಬಾರಿಗೆ ಮುಖಪುಟ / ಇವತ್ತು... ಈ ಹೊತ್ತು...
Story first published: Monday, August 20, 2001, 0:00 [IST]