ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ಶಿಲ್ಪೋ ಶಿವಾನಿ’ಯ ಉಮೇಶ ಬಂಗೇರರಿಗೆ ಪಣಿಯಾಡಿ ಪ್ರಶಸ್ತಿ

By Staff
|
Google Oneindia Kannada News

ಉಡುಪಿ: ತುಳುಕೂಟ ಉಡುಪಿ ಮತ್ತು ದುಬೈ ತುಳು ಕೂಟ, ಎಸ್ಸೆಲ್‌ ಜಾಹೀರಾತು ಸಂಸ್ಥೆ ಏರ್ಪಡಿಸಿದ್ದ ಸಮಾರಂಭದಲ್ಲಿ ಉಮೇಶ್‌ ಬಂಗೇರ ಕುಡ್ಲ ಅವರಿಗೆ ಗುರುವಾರ ಎಸ್‌. ಯು. ಪಣಿಯಾಡಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಬಂಗೇರ ಅವರ ಶಿಲ್ಪೋ ಶಿವಾನಿ ಕಾದಂಬರಿಗೆ ಈ ಪ್ರಶಸ್ತಿ ಲಭಿಸಿದ್ದು, ಮೂಡಬಿದಿರೆಯ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಗಳು ಬಂಗೇರ ಅವರಿಗೆ ಪ್ರಶಸ್ತಿ ಫಲಕ ಮತ್ತು ಗೌರವ ಧನ ನೀಡಿ ಸನ್ಮಾನಿಸಿದರು. ಪೊಳಲಿ ಶೀನಪ್ಪ ಹೆಗಡೆ ಎನ್‌. ಎಸ್‌. ಕಿಲ್ಲೆಯವರ ಸಾಲಿಗೆ ಸೇರಿರುವ ಸ್ವಾತಂತ್ರ್ಯ ಹೋರಾಟಗಾರ , ಎಸ್‌. ಯು. ಪಣಿಯಾಡಿ ಅವರ ನೆನಪಿಗಾಗಿ ಪ್ರಶಸ್ತಿಯನ್ನು ಸ್ಥಾಪಿಸಿರುವುದನ್ನು ಶ್ಲಾಘಿಸಿದ ಸ್ವಾಮೀಜಿಗಳು, ತುಳು ಕೃತಿಗಳನ್ನು ರಚಿಸಿದ ಹಾಗೆ ಓದುಗರನ್ನೂ ರೂಪಿಸುವ ಕಾರ್ಯ ನಡೆಯಬೇಕು ಎಂದರು.

ಸಮಾರಂಭದಲ್ಲಿ ‘ಮಂದಾರ ರಾಮಾಯಣ ಸ್ವರೂಪ ಮತ್ತು ಅನನ್ಯತೆ’ ಪ್ರಬಂಧಕ್ಕೆ ಡಾ. ಗಣನಾಥ ಎಕ್ಕಾರು ಹಾಗೂ ಕರ್ನಾಟಕ ನಾಟಕ ಮತ್ತು ಜಾನಪದ ಅಕಾಡೆಮಿ ಸದಸ್ಯ ಪ್ರೊ. ಎಂ. ಎಲ್‌. ಸಾಮಗರನ್ನು ಅಭಿನಂದಿಸಲಾಯಿತು.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X