ಉದ್ಯಾನದಿ ಉದ್ಭವಮೂರ್ತಿ!
ಬೆಂಗಳೂರು : ಅಕ್ರಮ ದೇವಾಲಯಗಳನ್ನು ಮುಲಾಜಿಲ್ಲದೆ ಕೆಡವಿ ಅಂತ ಮುಖ್ಯಮಂತ್ರಿ ಕೃಷ್ಣ ಅಪ್ಪಣೆ ಕೊಡಿಸಿದ್ದಾರೆ. ಆದರೆ ನಗರದ 40 ಪಾರ್ಕುಗಳಲ್ಲಿ ಹಿಂಡುಗಟ್ಟಲೆ ಭಕ್ತರು ಕೈಮುಗಿದು ನಿಂತಿರುತ್ತಾರೆ. ಇದನ್ನು ನೋಡುವ ಪಾಲಿಕೆ ಸಿಬ್ಬಂದಿ, ‘ಎಂಥಾ ಇಕ್ಕಟ್ಟಿಗೆ ಸಿಕ್ಕಿಸಿದೆಯಪ್ಪಾ, ನಿನ್ನನ್ನು ಕೆಡವೋ ಗತಿ ಬಂತಲ್ಲಾ ’ ಅಂತ ಒರಲುತ್ತಿದ್ದಾರೆ.
ಈ ಇಲ್ಲೀಗಲ್ ದೇವತಾಣಗಳನ್ನು ಬಿಸಿಸಿ ನಿರ್ದಾಕ್ಷಿಣ್ಯವಾಗಿ ಕೆಡವುತ್ತದೆಯೇ? ಸದ್ಯಕ್ಕಂತೂ ಇಲ್ಲ. ಹಬ್ಬಗಳ ಕಾಲದಲ್ಲಿ ದೇವಸ್ಥಾನ ಬೀಳಿಸೋದು ಅಂದರೆ... ಅದಕ್ಕೇ ಪರ್ವ ಕಾಲ ಮುಗಿದ ನಂತರ ಇವುಗಳನ್ನು ನೆಲಸಮ ಮಾಡುವ ಕೆಲಸ ಕೈಗೆತ್ತಿಕೊಳ್ಳಲು ಬಿಸಿಸಿ ನಿರ್ಧರಿಸಿದೆ.
ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 400 ಉದ್ಯಾನವನಗಳಿವೆ. ಈ ಪೈಕಿ 150 ಅಭಿವೃದ್ಧಿ ಹೊಂದಿದಂಥವು. ಇವು ಬರೇ ವಾಯುಸಂಚಾರಕ್ಕೆ, ಹರಟೆಗೆ, ಪ್ರೇಮಕ್ಕೆ ಹೇಳಿ ಮಾಡಿಸಿದ ತಾಣಗಳಾಗಿ ಈಗ ಉಳಿದಿಲ್ಲ. ಗಂಟೆ ಸದ್ದು- ಮಂತ್ರಘೋಷ ಜೋರಾಗಿ ಕೇಳುತ್ತಿದೆ.
ನಮೂನೆಗೆ-
- ಸಜ್ಜನ್ ರಾವ್ ವೃತ್ತ ಒಂದು ಸುಂದರ ಪಾರ್ಕು. ಅದರ 30 ಮೀ. ಉದ್ದ 17 ಮೀ. ಅಗಲದ ಜಾಗೆ ಈಗ ಅಯ್ಯಪ್ಪನದು ! ಬಗಲಲ್ಲೇ ಶನೇಶ್ವರನೂ ಉಂಟು.
- ಹನುಮಂತನಗರದ ಹರಿಹರ ಗುಡ್ಡ ಪಾರ್ಕಿನಲ್ಲಿ ಹರಿಹರೇಶ್ವರನಿಗೆ ಪೂಜೆಯಾಗುತ್ತಿದೆ. ಇವನು ಆಕ್ರಮಿಸಿಕೊಂಡಿರುವ ಸ್ಥಳ 22 ಅಡಿ ಉದ್ದ 50 ಅಡಿ ಅಗಲ.
- ಜಯನಗರದ 4 ಹಾಗೂ 6ನೇ ಬ್ಲಾಕಿನಲ್ಲಿರುವ ಎರಡು ಪಾರ್ಕುಗಳು ಈಗ ಪೂರ್ಣ ಪ್ರಮಾಣದ ಗಣೇಶ ದೇವಾಲಯಗಳು. ಅವು ಪಾರ್ಕು ಎನ್ನಲು ಯಾವ ಪುರಾವೆಗಳೂ ಇಲ್ಲ.
ಬಿಸಿಸಿ ಆಯುಕ್ತ ಅಶೋಕ್ ದಳವಾಯಿ ಅಕ್ರಮ ದೇವತಾಣಗಳಿಗೆ ಖಂಡಿತ ಉಳಿಗಾಲವಿಲ್ಲ. ಅವುಗಳನ್ನು ಪಟ್ಟಿ ಮಾಡಿರೆಂದು ಸಿಬ್ಬಂದಿಗೆ ಹೋಂವರ್ಕ್ ಕೊಟ್ಟಿದ್ದಾರೆ. ಪಟ್ಟಿ ಬಹುತೇಕ ಸಿದ್ಧವಾಗಿದೆ. ಆದರೆ, ಇದು ಭಾವನಾತ್ಮಕ ಹಾಗೂ ಸೂಕ್ಷ್ಮ ವಿಷಯವಾದ್ದರಿಂದ ಏಕಾಏಕಿ ದಾಳಿ ಸಾಧ್ಯವಿಲ್ಲ ಎನ್ನುತ್ತಾರವರು.
ಅಂದಹಾಗೆ, ಅಕ್ರಮ ಮೂರುತಿಗಳಿಗೆ ಪೂಜೆ ನಡೆಯುತ್ತಿರುವ ಪಾರ್ಕುಗಳ ಮೊದಲ ಪಟ್ಟಿ ಇಂತಿದೆ....
ಯಡಿಯೂರು ಪಾರ್ಕು, ರಾಮಾಂಜನೇಯ ಗುಡ್ಡ, ಬಿಟಿಎಂ ಲೇಔಟ್ ಪಾರ್ಕ್, ಲಕ್ಷ್ಮಣ್ ರಾವ್ ಬೌಲೆವಾರ್ಡ್, ಚಂದ್ರ ಲೇಔಟ್ ಪಾರ್ಕ್, ಮಲ್ಲೇಶ್ವರಂ ಪಾರ್ಕ್, ದೊಮ್ಮಲೂರು ಪಾರ್ಕ್, ಆವಲಹಳ್ಳಿ ಪಾರ್ಕ್, ಕದಿರೇನಹಳ್ಳಿ ಪಾರ್ಕ್ ಹಾಗೂ ಪುಲಿಕೇಶಿನಗರ ಪಾರ್ಕ್. ಟೈಮ್ಸ್ ಆಫ್ ಇಂಡಿಯಾ ಪತ್ರಿಕೆ ಈ ಸುದ್ದಿ ಪ್ರಕಟಿಸಿದೆ.
(ಇನ್ಫೋ ವಾರ್ತೆ)
ವಾರ್ತಾ ಸಂಚಯ
ಮುಖಪುಟ / ಕೃಷ್ಣಗಾರುಡಿಯ ಕನ್ನಡಿ
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications