ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಧಾರವಾಡ ವಿವಿ :ತೀರ್ಥಂಕರ, ಗಂಡುಭೇರುಂಡ ವಿಗ್ರಹಗಳ ಕಳವು
ಧಾರವಾಡ : ಇಲ್ಲಿನ ಕರ್ನಾಟಕ ವಿಶ್ವ ವಿದ್ಯಾಲಯದ ಪ್ರಾಚ್ಯ ವಸ್ತು ಸಂಗ್ರಹಾಲಯದಲ್ಲಿ ಜೈನ ತೀರ್ಥಂಕರರು ಹಾಗೂ ಗಂಡುಭೇರುಂಡ ವಿಗ್ರಹಗಳು ಕಳವಾಗಿರುವ ಪ್ರಕರಣ ವರದಿಯಾಗಿದೆ. ಈ ವಿಗ್ರಹಗಳು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಲಕ್ಷಾಂತರ ರುಪಾಯಿ ಬೆಲೆ ಬಾಳುತ್ತವೆ ಎಂದು ಹೇಳಲಾಗಿದೆ.
ಬಾಹುಬಲಿ, ಜ್ವಾಲಮಾಲಿನಿ, ಗಂಡುಭೇರುಂಡ, ಜೈನಭರ್ಮ ಮತ್ತು ಕುಳಿತಿರುವ ಹಾಗೂ ನಿಂತಿರುವ ತೀರ್ಥಂಕರರ ವಿಗ್ರಹಗಳು ಸಂಗ್ರಹಾಲಯದಿಂದ ಕಳವಾಗಿವೆ. ಗಂಡಭೇರುಂಡ ವಿಗ್ರಹವನ್ನು ಹೊರತು ಪಡಿಸಿದರೆ, ಉಳಿದೆಲ್ಲ ವಿಗ್ರಹಗಳು ಜೈನ ತೀರ್ಥಂಕರರ ವಿಗ್ರಹಗಳಾಗಿವೆ.
ವಿಗ್ರಹಗಳು 17, 18 ನೇ ಶತಮಾನಕ್ಕೆ ಸೇರಿವೆ. ಗಂಡುಭೇರುಂಡ ವಿಗ್ರಹ ಹಿರೇಕೆರೂರು ತಾಲ್ಲೂಕಿನ ಕ್ವಾಡ ಗ್ರಾಮಕ್ಕೆ ಸೇರಿದ್ದು ಎಂದು ವಸ್ತು ಸಂಗ್ರಹಾಲಯದ ನಿರ್ದೇಶಕ ಡಾ.ರಘುನಾಥ್ ಭಟ್ ತಿಳಿಸಿದ್ದಾರೆ.
(ಇನ್ಫೋ ವಾರ್ತೆ)
Comments
Story first published: Thursday, August 16, 2001, 0:00 [IST]