Get Updates
Get notified of breaking news, exclusive insights, and must-see stories!

ಕಾರಿಡಾರ್‌ಯೋಜನೆಗೆ ಅನುಮತಿ: ಪರಿಸರ ಸಚಿವಾಲಯ ತರಾಟೆಗೆ

ಬೆಂಗಳೂರು : 2,000 ಕೋಟಿ ರುಪಾಯಿ ಅಂದಾಜು ವೆಚ್ಚದ ಬೆಂಗಳೂರು- ಮೈಸೂರು ಕಾರಿಡಾರ್‌ (ಬಿಎಂಐಸಿ) ಯೋಜನೆಗೆ ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯ ಆಗಸ್ಟ್‌ 8ರಂದು ಹಸಿರು ನಿಶಾನೆ ತೋರಿದೆ. ಆದರೆ...

ನಂದಿ ಇನ್‌ಫ್ರಾಸ್ಟ್ರಕ್ಚರ್‌ ಕಾರಿಡಾರ್‌ ಎಂಟರ್‌ಪ್ರೆೃಸ್‌ (ಎನ್‌ಐಸಿಇ) ಈ ಯೋಜನೆಯನ್ನು ಕೈಗೆತ್ತಿಕೊಂಡಿದ್ದು, ಅದು 30 ಕರಾರುಗಳಿಗೆ ಬದ್ಧವಾಗಿರಬೇಕು ಎಂದು ಪರಿಸರ ಮತ್ತು ಅರಣ್ಯ ಸಚಿವಾಲಯ ಹೇಳಿದೆ. ನದಿ ತಟಗಳ ಮರಳನ್ನು ಯೋಜನೆಗೆ ಬಳಸಕೂಡದೆಂಬುದೂ ಕರಾರುಗಳಲ್ಲಿ ಒಂದು. ಆದರೆ ಎನ್‌ಐಸಿಇ ಯೋಜನೆಯ ತನ್ನ ಪ್ರಸ್ತಾವನೆಯಲ್ಲಿ ನದಿ ತಟಗಳ ಮರಳನ್ನು ಬಳಸುವುದಾಗಿ ಹೇಳಿತ್ತು.

ಕಳೆದ 5 ವರ್ಷಗಳಿಂದ ಪರಿಸರ ವಾದಿಗಳ ಒಂದಿಲ್ಲೊಂದು ತಕರಾರಿಗೆ ಒಳಗಾಗಿ ಮುಂದೂಡಿಕೊಂಡೇ ಬಂದಿರುವ ಈ ಯೋಜನೆ ಗೆ ಈಗಲೂ ಎಡರುಗಳು ಎದುರಾಗುತ್ತಿವೆ. 3 ಪರಿಸರ ಹಾಗೂ ಗ್ರಾಹಕ ಸಂಸ್ಥೆಗಳು ಕಾರಿಡಾರ್‌ ಯೋಜನೆಗೆ ಅನುಮತಿ ಕೊಟ್ಟಿರುವ ಕೇಂದ್ರ ಪರಿಸರ ಸಚಿವಾಲಯವನ್ನು ಮಂಗಳವಾರ ತರಾಟೆಗೆ ತೆಗೆದುಕೊಂಡಿದ್ದು, ಇದು ಸಂವಿಧಾನ ಬಾಹಿರ ಎಂದು ಆರೋಪಿಸಿವೆ. ಕೇಂದ್ರದ ಈ ನಡಾವಳಿಯನ್ನು ಪ್ರಶ್ನಿಸುವುದಾಗಿ ಹೇಳಿವೆ.

ಪರಿಸರ ಸಹಕಾರಿ ಸಂಘ, ಮೈಸೂರು ಗ್ರಾಹಕ ರಕ್ಷಕ ಪರಿಷತ್ತು ಹಾಗೂ ಕರ್ನಾಟಕ ವಿಮೋಚನಾ ರಂಗದ ಪ್ರತಿನಿಧಿಗಳು ಸುದ್ದಿಗಾರರೊಂದಿಗೆ ಮಾತನಾಡಿದರು. ಕಳೆದ ವರ್ಷ ಮಾನವ ಹಕ್ಕುಗಳ ಉಲ್ಲಂಘನೆ ಕುರಿತಂತೆ ಸಾಕಷ್ಟು ವಿಚಾರಣೆ ನಡೆದಿತ್ತು. ಮಾನವ ಹಕ್ಕುಗಳ ಆಯೋಗ ತನ್ನ ತೀರ್ಪನ್ನು ಸದ್ಯದಲ್ಲೇ ನೀಡುವ ನಿರೀಕ್ಷೆಯಿದೆ. ಅದು ತೀರ್ಪು ನೀಡುವವರೆಗೂ ಕಾಯದೆ, ಪರಿಸರ ಸಚಿವಾಲಯ ಯೋಜನೆಗೆ ಹಸಿರು ನಿಶಾನೆ ತೋರಿರುವುದು ತರವಲ್ಲ ಎಂದರು.

2 ಲಕ್ಷ ಜನ ಮನೆ ಕಳಕೊಳ್ಳುತ್ತಾರೆ : ತಜ್ಞರ ಸಮಿತಿಯಾಂದು ಕಾರಿಡಾರ್‌ ಯೋಜನೆಯನ್ನು ಪರಾಮರ್ಶಿಸುತ್ತಿದ್ದು, ಅದೂ ಕೂಡ ಇನ್ನೂ ವರದಿ ನೀಡಿಲ್ಲ. ಕಾರಿಡಾರ್‌ ಯೋಜನೆಯಾಟ್ಟಿಗೇ ಬೆಂಗಳೂರು- ಮೈಸೂರು ನಡುವೆ 5 ಮುಖ್ಯ ಟೌನ್‌ಷಿಪ್‌ ಯೋಜನೆಗಳೂ ಜಾರಿಗೆ ಬರಲಿವೆ. ಪ್ರತಿ ಟೌನ್‌ನಲ್ಲಿ 5 ಲಕ್ಷ ಜನಸಂಖ್ಯೆ ಇರಲಿದೆ. 170 ಹಳ್ಳಿಗಳ ಸುಮಾರು 2 ಲಕ್ಷ ಮಂದಿ ನಿರಾಶ್ರಿತರಾಗುವ ಭಯವಿದ್ದು, ಇವೆಲ್ಲಾ ಕೇಂದ್ರ ಪರಿಸ ಸಚಿವಾಲಯದ ಗಮನಕ್ಕೆ ಬರಲಿಲ್ಲವೇ ಎಂಬುದು ಪರಿಸರ ವಾದಿಗಳ ಪ್ರಶ್ನೆ.

(ಯುಎನ್‌ಐ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+