ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅನಿವಾಸಿ ಭಾರತೀಯರ ರಕ್ಷಣೆಗೆಸರಕಾರ ಬದ್ಧ- ಜಸ್ವಂತ್‌ಸಿಂಗ್‌

By Staff
|
Google Oneindia Kannada News

ಬೆಂಗಳೂರು : ಅನಿವಾಸಿ ಭಾರತೀಯರ ರಕ್ಷಣೆಗೆ ಸರಕಾರ ಯಾವತ್ತೂ ಬದ್ಧವಾಗಿದೆ. ಅವರು ತಮ್ಮ ಯಾವುದೇ ಸಮಸ್ಯೆಗಳನ್ನು ನೇರವಾಗಿ ಭಾರತ ಸರಕಾರಕ್ಕೆ ತಿಳಿಸಬಹುದು ಎಂದು ವಿದೇಶಾಂಗ ಮತ್ತು ರಕ್ಷಣಾ ಸಚಿವ ಜಸ್ವಂತ್‌ ಸಿಂಗ್‌ ತಿಳಿಸಿದ್ದಾರೆ.

ಅವರು ಭಾನುವಾರ ಚನ್ನೇನಹಳ್ಳಿಯಲ್ಲಿ ನಡೆದ ವಿಶ್ವ ಸಂಘ ಶಿಕ್ಷಾವರ್ಗ ಸಮಾರೋಪ ಸಮಾರಂಭ ದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡು ತ್ತಿದರು. ಅನಿವಾಸಿ ಭಾರತೀಯರ ಸಮಸ್ಯೆಗಳನ್ನು ಆಲಿಸಲು ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದ್ದು ಇದರ ಸದುಪಯೋಗ ಪಡಿಸಿಕೊಳ್ಳಬೇಕು . ದೇಶ ಮತ್ತು ಪ್ರಪಂಚದ ವಿವಿಧ ಭಾಗದಲ್ಲಿರುವ ಭಾರತೀಯರ ರಕ್ಷಣೆ ಸರಕಾರದ ಕರ್ತವ್ಯ ಎಂದ ಜಸ್ವಂತ್‌ಸಿಂಗ್‌, ಅನಿವಾಸಿ ಭಾರತೀಯರು ಮಾರ್ಗದರ್ಶನಕ್ಕಾಗಿ ಭಾರತದತ್ತ ನೋಡುತ್ತಿದ್ದಾರೆ ಎಂದರು.
ಯಾವುದೇ ದೇಶದ ವಿರುದ್ಧ ಭಾರತ ಆಕ್ರಮಣಕಾರಿ ಧೋರಣೆ ಹೊಂದಿಲ್ಲ. ಅಂತಾರಾಷ್ಟ್ರೀಯ ಮಟ್ಟದಲ್ಲಿ, ಅಭಿ ವೃದ್ಧಿ ಪಥದಲ್ಲಿರುವ ಭಾರತದ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಯನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಶಿಕ್ಷಾವರ್ಗದ ಕಾರ್ಯದರ್ಶಿ ರವಿ ಕುಮಾರ್‌, ಅನಿವಾಸಿ ಭಾರತೀಯರಿಗಾಗಿ ನಡೆಸುತ್ತಿ ರುವ ಮೂರನೇ ಶಿಬಿರ ಇದಾಗಿದ್ದು ವಿವಿಧ ರಾಷ್ಟ್ರಗಳಲ್ಲಿರುವ ಹಿಂದುಗಳನ್ನು ಸಂಘಟಿಸುವುದು ಕಾರ್ಯಕ್ರಮದ ಉದ್ದೇಶ ಎಂದರು. ವಿಶ್ವ ಸಂಘ ಶಿಕ್ಷಾ ವರ್ಗದಲ್ಲಿ 10 ರಾಷ್ಟ್ರಗಳ 100 ಮಂದಿ ಭಾಗವಹಿಸಿದ್ದರು.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X