ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೊಟ್ಟಿ ಪಂಚಮಿ ಸಂಭ್ರಮಕ್ಕೆ‘ಉ.ಕ.ನಾಗರಿಕ ಅಭಿವೃದ್ಧಿ ಸಂಘ’ ಸಜ್ಜು

By Staff
|
Google Oneindia Kannada News

ಬೆಂಗಳೂರು : ನಾಗರ ಪಂಚಮಿ ಪ್ರಯುಕ್ತ ‘ಉತ್ತರ ಕರ್ನಾಟಕ ನಾಗರಿಕ ಅಭಿವೃದ್ಧಿ ಸಂಘ’ ರೊಟ್ಟಿ ಪಂಚಮಿ ಹಬ್ಬವನ್ನು ಆಗಸ್ಟ್‌ 15 ರ ಬುಧವಾರ ಅರ್ಥಪೂರ್ಣವಾಗಿ ಆಚರಿಸಲು ಸಜ್ಜಾಗಿದೆ.

ಸಿ.ವಿ.ರಾಮನ್‌ ನಗರದ ಡಿಆರ್‌ಡಿಸಿ ರೆಸಿಡೆನ್ಸಿಯಲ್‌ ಕಾಂಪ್ಲೆಕ್ಸ್‌ನಲ್ಲಿರುವ ಸಮುದಾಯ ಭವನದಲ್ಲಿ ಬುಧವಾರ ಬೆಳಗ್ಗೆ 11 ರಿಂದ ರೊಟ್ಟಿ ಪಂಚಮಿ ಹಬ್ಬದ ಆಚರಣೆ ಪ್ರಾರಂಭವಾಗಲಿದೆ. ಮಕ್ಕಳ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ವಿಶೇಷ ಹಬ್ಬದ ಊಟವನ್ನು ರೊಟ್ಟಿ ಪಂಚಮಿ ಪ್ರಯುಕ್ತ ಏರ್ಪಡಿಸಲಾಗಿದೆ.

ಸಂಘದ ಎಲ್ಲ ಸದಸ್ಯರು ಹಬ್ಬದ ಆಚರಣೆಗೆ ಕುಟುಂಬ ಸಮೇತ ಆಗಮಿಸಬೇಕು ಎಂದು ಸಂಘದ ಪದಾಧಿಕಾರಿಗಳಾದ ಎಸ್‌.ಎನ್‌. ಕಾತರಕಿ, ಸಿ.ವೈ.ಪಾಟೀಲ ಹಾಗೂ ಎನ್‌.ಬಿ.ಬನ್ನೂರ ಸುದ್ದಿ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಇಂದಿರಾನಗರದ 80 ಅಡಿ ರಸ್ತೆ ಚಿನ್ಮಯ ಆಸ್ಪತ್ರೆ, ಎ.ಡಿ.ಎ. ಗೇಟ್‌ ಬಳಿಯಿಂದ ವಿಶೇಷ ಬಸ್‌ ವ್ಯವಸ್ಥೆ ಮಾಡಲಾಗಿದೆ ಎಂದೂ ಅವರು ತಿಳಿಸಿದ್ದಾರೆ.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X