Get Updates
Get notified of breaking news, exclusive insights, and must-see stories!

ನವವಿವಾಹಿತರು- ದೇವರನ್ನೂ ಬಿಡದ ಆಷಾಢKSRTC

ಹಾಸನ : ಆಷಾಢದಲ್ಲಿ ರೈತರು ಬಿತ್ತನೆಯ ಸಿದ್ಧತೆಗಳನ್ನು ನಡೆಸಿದರೆ, ವ್ಯಾಪಾರಿಗಳು ತಲೆಗೆ ಕೈ ಹೊತ್ತು ಗಲ್ಲಾ ಪೆಟ್ಟಿಗೆಯ ಮುಂದೆ ಮ್ಲಾನವದನರಾಗಿ ಕೂರುವುದು ಪ್ರತಿ ಆಷಾಡದಲ್ಲೂ ಮಾಮೂಲೆ. ಇಂಥ ‘ಆಷಾಢ’ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯನ್ನೂ ಬಿಡದೆಂದರೆ-

ಹೇಗೆ ಬಿಟ್ಟೀತು? ನವವಿವಾಹಿತರು ಹಾಗೂ ದೇವರನ್ನೂ ಬಿಡದ ಆಷಾಢ ಮಾಸ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯನ್ನು ಬಿಟ್ಟೀತೆಂದು ಭಾವಿಸುವುದಾದರೂ ಹೇಗೆ ? ವಿಷಯವಿದು,- ಮೊನ್ನೆಯಷ್ಟೇ ಮುಗಿದ ಆಷಾಢದ ಪ್ರಭಾವದಿಂದಾಗಿ ಕೆಎಸ್‌ಆರ್‌ಟಿಸಿ ಎರಡು ಕೋಟಿ ರುಪಾಯಿಗಳ ನಷ್ಟವನ್ನು ಅನುಭವಿಸಿದೆ. ಈ ವಿಷಯವನ್ನು ಸಾರಿಗೆ ಸಚಿವ ಸಗೀರ್‌ ಅಹ್ಮದ್‌ ತಿಳಿಸಿದ್ದಾರೆ.

ಇತ್ತೀಚೆಗೆ ಹಾಸನದಲ್ಲಿ ಜರುಗಿದ ಉರ್ದು ಕವಿಗೋಷ್ಠಿಯಲ್ಲಿ ಭಾಗವಹಿಸಿದ್ದ ಸಚಿವರು, ಕೆಎಸ್‌ಆರ್‌ಟಿಸಿ ಮೇಲೆ ಆಷಾಢದ ಪ್ರಭಾವವನ್ನು ಬಣ್ಣಿಸಿದರು. ಈ ಅವಧಿಯಲ್ಲಿ ಪ್ರಯಾಣಕ್ಕೆ ಶೇ.10 ರಿಯಾಯಿತಿ, ಮರು ಪ್ರಯಾಣಕ್ಕೆ ಶೇ.20 ರ ರಿಯಾಯಿತಿಯಂಥ ವಿಶೇಷ ಯೋಜನೆಗಳನ್ನು ಪ್ರಕಟಿಸಿದರೂ ಉಪಯೋಗವಾಗಿಲ್ಲ ಅನ್ನುವುದು ಸಚಿವರ ಅಳಲು. ಆದರೂ, ಸಾರಿಗೆ ನಿಗಮದ ಆರ್ಥಿಕ ಸ್ಥಿತಿ ಅಧ್ವಾನವೇನೂ ಆಗಿಲ್ಲ , ಉತ್ತಮವಾಗಿದೆ ಎಂದು ಅವರು ಸಮಾಧಾನ ಪಟ್ಟುಕೊಂಡರು.

ವಾಹನಗಳಿಗೆ ಎಲ್‌ಪಿಜಿ ಇಂಧನ ಅಳವಡಿಸುವ ಮಸೂದೆಯ ಕುರಿತು ಮಾತನಾಡಿದ ಅವರು, ಇನ್ನು ಮೂರ್ನಾಲ್ಕು ವರ್ಷಗಳಲ್ಲಿ ಪೆಟ್ರೋಲ್‌ ಬಳಕೆಯ ವಾಹನಗಳಲ್ಲಿ ಎಲ್‌ಪಿಜಿ ಬಳಕೆ ಸಾಮಾನ್ಯವಾಗಲಿದೆ ಎಂದರು. ಅಂದಹಾಗೆ, ಆಷಾಢದಲ್ಲಾದ ನಷ್ಟವನ್ನು ಶ್ರಾವಣ ತುಂಬಿತೇ ಅನ್ನುವುದರ ಬಗ್ಗೆ ಸಗೀರ್‌ ಅಹ್ಮದ್‌ ಏನನ್ನೂ ಹೇಳಲಿಲ್ಲ.

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+