ಕೃಷ್ಣ ಕಣಿವೆ ಅಕ್ರಮ ನೀರಾವರಿ ಕಾಮಗಾರಿ : ಆಂಧ್ರಕ್ಕೆ ನೋಟಿಸ್
ನವದೆಹಲಿ : ಆಂಧ್ರಪ್ರದೇಶ ಸರಕಾರ ಕೃಷ್ಣ ಕಣಿವೆಯಲ್ಲಿ ಕೈಗೊಂಡಿರುವ ಐದು ಅಕ್ರಮ ನೀರಾವರಿ ಕಾಮಗಾರಿಗಳಿಗೆ ಸಂಬಂಧಿಸಿದಂತೆ, ಸರ್ವೋನ್ನತ ನ್ಯಾಯಾಲಯವು ಕೇಂದ್ರ ಹಾಗೂ ಆಂಧ್ರಪ್ರದೇಶ ಸರಕಾರಗಳಿಗೆ ನೋಟಿಸ್ ಜಾರಿ ಮಾಡಿದೆ.
ಆಂಧ್ರಪ್ರದೇಶ ಸರಕಾರ ಕೃಷ್ಣ ನದಿ ಕೊಳ್ಳದಲ್ಲಿ ಅಕ್ರಮವಾಗಿ ಕೈಗೊಂಡಿರುವ ಪುಲಿಚಿಂತಲಾ, ಶ್ರೀಶೈಲ ಬಲದಂಡೆ ಮತ್ತು ಎಡದಂಡೆ ಕಾಮಗಾರಿ, ತೆಲುಗುಗಂಗಾ ಹಾಗೂ ಭೀಮ ಏತ ನೀರಾವರಿ ಯೋಜನೆಗಳನ್ನು ಸ್ಥಗಿತಗೊಳಿಸುವಂತೆ ಆದೇಶಿಸಬೇಕು ಎಂದು ಕೋರಿ ಕರ್ನಾಟಕ ರಾಜ್ಯ ಸರಕಾರ ತಕರಾರು ಅರ್ಜಿ ಸಲ್ಲಿಸಿತ್ತು.
ಈ ಅರ್ಜಿಯನ್ನು ವಿಚಾರಣೆಗೆ ಅಂಗೀಕರಿಸಿರುವ ನ್ಯಾಯಮೂರ್ತಿ ಪಾಟ್ನಾಯಕ್ ಹಾಗೂ ರೂಮಾಪಾಲ್ ಅವರನ್ನೊಳಗೊಂಡ ವಿಭಾಗೀಯ ಪೀಠವು, ಈ ಸಂಬಂಧ ನಾಲ್ಕು ವಾರಗಳ ಅವಧಿಯಾಳಗೆ ನ್ಯಾಯಾಲಯಕ್ಕೆ ಹೇಳಿಕೆ ಸಲ್ಲಿಸಲು ಕಾಲಾವಕಾಶ ನೀಡಿ, ಕೇಂದ್ರ ಸರಕಾರ, ಆಂಧ್ರ ಸರಕಾರ ಹಾಗೂ ಕೃಷ್ಣನದಿ ನೀರಿನಲ್ಲಿ ಪಾಲು ಪಡೆವ ಮಹಾರಾಷ್ಟ್ರ ಸರಕಾರಗಳಿಗೆ ನೋಟಿಸ್ ಜಾರಿ ಮಾಡಿದೆ.
ಆಂಧ್ರ ಪ್ರದೇಶ ಸರಕಾರ ಅಕ್ರಮವಾಗಿ ಕೈಗೆತ್ತಿಕೊಂಡಿದ್ದ ಐದು ನೀರಾವರಿ ಕಾಮಗಾರಿಗಳನ್ನು ಸ್ಥಗಿತಗೊಳಿಸುವಂತೆ ಸುಪ್ರೀಂ ಕೋರ್ಟ್ 25-4-2000ದಂದು ನೀಡಿದ್ದ ನಿರ್ದೇಶನವನ್ನು ಜಾರಿಗೆ ತರುವಲ್ಲಿ ಕೇಂದ್ರ ಸರಕಾರ ಹಾಗೂ ಆಂಧ್ರ ಸರಕಾರಗಳು ವಿಫಲವಾಗಿವೆ ಎಂದು ಕರ್ನಾಟಕ ಸರಕಾರ ತಕರಾರು ಅರ್ಜಿಯಲ್ಲಿ ಆರೋಪಿಸಿತ್ತು.
ವಾರ್ತಾ
ಸಂಚಯ
ಮುಖಪುಟ
/
ಇವತ್ತು...
ಈ
ಹೊತ್ತು...