Get Updates
Get notified of breaking news, exclusive insights, and must-see stories!

ತೀರ್ಥೋದ್ಭವದ ಕಾತರದಲ್ಲಿ ತಲಕಾವೇರಿ

ಮಡಿಕೇರಿ : ಈ ವರ್ಷದ ಕಾವೇರಿ ತೀರ್ಥೋದ್ಭವ ಅಕ್ಟೋಬರ್‌ 17ರ ತುಲಾ ಸಂಕ್ರಮಣದಂದು ತಲಕಾವೇರಿಯಲ್ಲಿ ನಡೆಯಲಿದ್ದು , ಕೊಡಗು ಜಿಲ್ಲಾಡಳಿತ ಜಾತ್ರೆಗೆ ಸರ್ವ ಸಿದ್ಧತೆಯನ್ನೂ ಮಾಡುತ್ತಿದೆ.

ಕಾವೇರಿ ತೀರ್ಥೋತ್ಭವದಂದು ರಾಜ್ಯಾದ್ಯಂತದಿಂದ ಅಸಂಖ್ಯ ಭಕ್ತರು ಕೊಡಗಿಗೆ ಆಗಮಿಸಲಿದ್ದಾರೆ. ಭಕ್ತಾದಿಗಳಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಜಿಲ್ಲೆಯ ವಿವಿಧ ಅಧಿಕಾರಿಗಳಿಗೆ ಜವಾಬ್ದಾರಿಗಳನ್ನು ಈಗಾಗಲೇ ವಹಿಸಿಕೊಡಲಾಗಿದೆ. ಅಕ್ಟೋಬರ್‌ 16ರಿಂದ 18ರವರೆಗೆ ತಲಕಾವೇರಿ ದೇವಸ್ಥಾನದಲ್ಲಿ ಉತ್ಸವ ನಡೆಯಲಿದ್ದು ಈ ಎರಡು ದಿನಗಳಲ್ಲಿ ಭಾಗಮಂಡಲ ಮತ್ತು ತಲಕಾವೇರಿ ಪ್ರದೇಶದಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್‌ ಏರ್ಪಡಿಸಲಾಗಿದೆ.

ಉತ್ಸವದ ನೆಪದಲ್ಲಿ ಮಡಿಕೇರಿ ರಸ್ತೆಗಳು ರಿಪೇರಿಯಾಗುತ್ತಿವೆ. ಸೇತುವೆಗಳು ಸುಣ್ಣ ಬಣ್ಣ ಕಾಣುತ್ತಿವೆ. ಬಸ್‌ ಸ್ಟ್ಯಾಂಡ್‌ಗಳಿಗೆ ಛಾವಣಿ ಹೊದೆಸಲಾಗುತ್ತಿದೆ. ಉತ್ಸವದ ಸಮಯದಲ್ಲಿ , ತಲಕಾವೇರಿಯಲ್ಲಿ ತಾತ್ಕಾಲಿಕ ಆರೋಗ್ಯ ಕೇಂದ್ರವನ್ನು ಸ್ಥಾಪಿಸಲು ಜಿಲ್ಲಾಧಿಕಾರಿಗಳು ಆರೋಗ್ಯಾಧಿಕಾರಿಗಳಿಗೆ ನಿರ್ದೇಶಿಸಿದ್ದಾರೆ. ಜಿಲ್ಲೆಯಲ್ಲಿರುವ ಕುಡಿಯುವ ನೀರಿನ ಟ್ಯಾಂಕ್‌ಗಳು ಮತ್ತು ಹೊಟೇಲುಗಳು ಬಳಸುವ ನೀರು ಮತ್ತು ಆಹಾರದ ಸ್ವಚ್ಛತೆಯನ್ನು ಜಿಲ್ಲಾಡಳಿತದ ಸಮಿತಿ ಪರೀಕ್ಷಿಸುತ್ತಿದೆ.

ಜಿಲ್ಲಾ ಪಂಚಾಯತ್‌ನ ಇಂಜಿನಿಯರಿಂಗ್‌ ವಿಭಾಗವು ಯಾತ್ರಿಗಳಿಗಾಗಿ ತಾತ್ಕಾಲಿಕ ಶೌಚಾಲಯ ನಿರ್ಮಾಣ ಕಾರ್ಯ ಕೈಗೆತ್ತಿಕೊಂಡಿದೆ. ಕುಡಿಯುವ ನೀರು, ವಿದ್ಯುತ್‌ ಸರಬರಾಜಿನ ಸಮರ್ಪಕತೆಯ ಜೊತೆಗೆ ಭಕ್ತರನ್ನು ಸ್ವಾಗತಿಸಲು ಬ್ಯಾನರು, ಪೋಸ್ಟರುಗಳೂ ಸಿದ್ಧವಾಗಿವೆ. ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಉತ್ಸವದ ದಿನಗಳಲ್ಲಿ ಹೆಚ್ಚುವರಿ ವಿಶೇಷ ಬಸ್‌ಗಳನ್ನು ಓಡಿಸಲಿದೆ.

ಕನ್ನಡ ಮತ್ತು ಸಂಸ್ಕೃತಿ ವಿಭಾಗವು ತೀರ್ಥೋದ್ಭವ ಜಾತ್ರೆಯ ದಿನಗಳಲ್ಲಿ ಪ್ರತಿ ದಿನ ಸಂಜೆ 6ರಿಂದ 10 ಗಂಟೆವರೆಗೆ ಸಾಂಸ್ಕೃತಿಕ ಕಾರ್ಯಕ್ರಮ ನೀಡಲು ರೆಡಿಯಾಗುತ್ತಿದೆ. ಕೊಡಗಿನ ನೂತನ ಜಿಲ್ಲಾಧಿಕಾರಿ ರಾಮಚಂದ್ರ ಅವರು ತಾವೇ ಸ್ವತಃ ತೀರ್ಥೋತ್ಭವ ಜಾತ್ರೆ ನಿರ್ವಹಣೆಯ ಉಸ್ತುವಾರಿ ವಹಿಸುವುದಾಗಿ ಹೇಳಿದ್ದಾರೆ.

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+