ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಣೇಶೋತ್ಸವ ಆಚರಣೆ : ಇಲ್ಲಿದೆ ಪಾಲಿಸಲೇಬೇಕಾದ ನೀತಿ ಸಂಹಿತೆ

By Staff
|
Google Oneindia Kannada News

ಬೆಂಗಳೂರು : ಗೌರಿ ಗಣೇಶ ಉತ್ಸವದ ಹೆಸರಿನಲ್ಲಿ ಸಾರ್ವಜನಿಕರು ಹಾಗೂ ವ್ಯಾಪಾರಿಗಳಿಂದ ಬಲವಂತವಾಗಿ ಚಂದಾ ವಸೂಲಿ ಮಾಡುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವುದಾಗಿ ಪೊಲೀಸ್‌ ಕಮೀಷನರ್‌ ಟಿ.ಮಡಿಯಾಳ್‌ ಎಚ್ಚರಿಕೆ ನೀಡಿದ್ದಾರೆ.

ಗಣೇಶ ಉತ್ಸವ ಆಚರಣೆಯ ಕುರಿತು ಹೊರಡಿಸಿರುವ ಮಾಧ್ಯಮ ಪ್ರಕಟಣೆಯಲ್ಲಿ ಅನೇಕ ಸಲಹೆ, ಸೂಚನೆಗಳನ್ನು ಮಡಿಯಾಳ್‌ ವ್ಯವಸ್ಥಾಪಕರಿಗೆ ನೀಡಿದ್ದಾರೆ. ಅವುಗಳೆಂದರೆ-

  • ಗಣೇಶ ವಿಸರ್ಜನೆಯನ್ನು ಹಗಲು ವೇಳೆಯಲ್ಲೇ ಮಾಡಬೇಕು.
  • ಸಾರ್ವಜನಿಕ ಮತ್ತು ಪಾದಚಾರಿ ರಸ್ತೆಗಳಲ್ಲಿ ಗಣೇಶೋತ್ಸವದ ಚಪ್ಪರ ಹಾಕುವಂತಿಲ್ಲ . ಚಪ್ಪರ ಹಾಕಿರುವ ಪ್ರತಿಯಾಂದು ಸ್ಥಳದಲ್ಲಿ ವ್ಯವಸ್ಥಾಪಕರೇ ರಾತ್ರಿ ವೇಳೆಯ ರಕ್ಷಣೆ ವ್ಯವಸ್ಥೆ ಮಾಡಿಕೊಳ್ಳಬೇಕು.
  • ಉತ್ಸವದ ಮೆರವಣಿಗೆ ಪೊಲೀಸರು ಸೂಚಿಸಿರುವ ಮಾರ್ಗದಲ್ಲೇ ಸಾಗಬೇಕು.
  • ಗಣೇಶ ಪ್ರತಿಷ್ಠಾಪನೆ ಸಮಯ, ವಿಸರ್ಜನೆಯ ಸಮಯ ಹಾಗೂ ಮಾರ್ಗ, ಕಾರ್ಯಕ್ರಮದಲ್ಲಿ ಭಾಗವಹಿಸುವ ಜನ ಸಮೂಹದ ವಿವರಗಳನ್ನು ಸ್ಥಳೀಯ ಪೊಲೀಸರಿಗೆ ಮುಂಚಿತವಾಗಿಯೇ ತಿಳಿಸಬೇಕು.
  • ಉತ್ಸವದ ಆರಂಭ ಮತ್ತು ವಿಸರ್ಜನೆಯ ಮೆರವಣಿಗೆ ಸಂದರ್ಭದಲ್ಲಿ ರಾತ್ರಿ 10 ರಿಂದ ಬೆಳಗ್ಗೆ 6 ರವರೆಗೆ ಧ್ವನಿವರ್ಧಕ ಹಾಗೂ ಜನರೇಟರ್‌ಗಳ ಬಳಕೆ ನಿಷಿದ್ಧ. ಪಟಾಕಿ ಮತ್ತಿತರ ಸಿಡಿಮದ್ದುಗಳನ್ನು ಸಿಡಿಸುವುದನ್ನೂ ನಿಷೇಧಿಸಲಾಗಿದೆ.
(ಇನ್ಫೋ ವಾರ್ತೆ)
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X