ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಜೆ. ಏಸುದಾಸ್ ಕಂಠ ಸಿರಿಯಲ್ಲಿ ‘ಇಂದು ಎನಗೆ ಗೋವಿಂದ...’
ಮಂತ್ರಾಲಯ : ನಮಗೆ ಲಭ್ಯವಿರುವ ಶ್ರೀಗುರುರಾಘವೇಂದ್ರ ಸ್ವಾಮಿಗಳು ರಚಿಸಿದ ಏಕೈಕ ಕನ್ನಡ ಗೀತರತ್ನ ‘ಇಂದು ಎನಗೆ ಗೋವಿಂದ.... ’ ವನ್ನು ಸುಶ್ರಾವ್ಯವಾಗಿ ಹಾಡುವ ಮೂಲಕ ಹೆಸರಾಂತ ಗಾಯಕ ಜೆ. ಏಸುದಾಸ್ ಮಂತ್ರಾಲಯದ ಗುರುಗಳ ಸನ್ನಿಧಿಯಲ್ಲಿ ಗೀತಾರಾಧನೆ ಮಾಡಿದರು.
ಪ್ರಪ್ರಥಮ ಬಾರಿಗೆ ಏಸುದಾಸ್ ಹಾಡಿದ ಈ ಗೀತೆಯನ್ನು ಕೇಳಿ ಸಾವಿರಾರು ಭಕ್ತರು ಭಾವಪರವಶರಾದರು. ಗುರು ರಾಘವೇಂದ್ರಸ್ವಾಮಿಗಳ ಆರಾಧನೆ ಅಂಗವಾಗಿ ಮಂತ್ರಾಲಯಕ್ಕೆ ಆಗಮಿಸಿದ್ದ, ಏಸುದಾಸ್ ಅವರಿಗೆ ಅದ್ಧೂರಿಯ ಸ್ವಾಗತ ನೀಡಲಾಯಿತು.
ದೇಗುಲಕ್ಕೆ ಆಗಮಿಸಿದ ಏಸುದಾಸ್ ದಂಪತಿಗಳನ್ನು ಶ್ರೀ ಸುಶಮೀಂದ್ರ ತೀರ್ಥ ಸ್ವಾಮಿಗಳು, ಸ್ವಾಗತಿಸಿ, ಆಸ್ಥಾನ ಗಾಯಕ ಪ್ರಶಸ್ತಿ ನೀಡಿ ಗೌರವಿಸಿದರು. ಇದೇ ಸಂದರ್ಭದಲ್ಲಿ ಸುಮಾರು ಮೂರು ಗಂಟೆಗಳ ಕಾಲ ಏಸುದಾಸ್ ಅವರಿಂದ ಸಂಗೀತ ಕಚೇರಿ ನಡೆಯಿತು.
ಮುಖಪುಟ / ಇವತ್ತು... ಈ ಹೊತ್ತು...
Comments
Story first published: Sunday, August 12, 2001, 0:00 [IST]