ಬೆಂಗಳೂರು ಈಗ ಉದ್ಯಾನ ನಗರಿ ಅಲ್ಲ‘ಆತ್ಯಹತ್ಯೆಯ ನಗರಿ’
ಬೆಂಗಳೂರು : ಉದ್ಯಾನ ನಗರಿ, ಭಾರತದ ಸಿಲಿಕಾನ್ ಸಿಟಿ, ಸೈಬರ್ ನಗರಿ ಎಂದೆಲ್ಲಾ ಖ್ಯಾತವಾಗಿರುವ ಬೆಂಗಳೂರಿಗೆ ಈಗ ‘ಆತ್ಮಹತ್ಯೆ ನಗರಿ’ ಎಂಬ ಅಪಖ್ಯಾತಿಯೂ ಅಂಟಿಕೊಂಡಿದೆ. ಬೆಂಗಳೂರಿನ ನಿಮ್ಹಾನ್ಸ್ ವೈದ್ಯರ ತಂಡ ನಡೆಸಿರುವ ಅಧ್ಯಯನ ಈ ವಿಷಯ ತಿಳಿಸಿದೆ.
ನಿಮ್ಹಾನ್ಸ್ ವೈದ್ಯರಾದ ಡಾ. ಗುರುರಾಜ್ ಅವರ ಪ್ರಕಾರ ಹತ್ತು ವರ್ಷಗಳ ಅವಧಿಯಲ್ಲಿ ಬೆಂಗಳೂರಿನಲ್ಲಿ ಆತ್ಮಹತ್ಯೆ ಪ್ರಕರಣಗಳ ಪ್ರಮಾಣ ಸುಮಾರು ಶೇ. 250ರಷ್ಟು ಏರುತ್ತಿದೆ. ನಗರೀಕರಣ, ನಗರ ಪ್ರದೇಶದ ಒತ್ತಡ, ಆಧುನಿಕ ಜಗತ್ತಿನಲ್ಲಿ ಉದ್ಭವಿಸುತ್ತಿರುವ ಸ್ಪರ್ಧೆಯನ್ನು ಎದುರಿಸಲಾರದ ದುರ್ಬಲ ಮನಸ್ಸಿನವರು ಆತ್ಮಹತ್ಯೆಯ ಶರಣು ಹೋಗುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.
ಅಂಕಿ ಅಂಶ-ಗ-ಳ ಪ್ರಕಾ-ರ, 1998 ರಲ್ಲಿ ಪ್ರತಿ 1 ಲಕ್ಷ ಜನ-ಸಂ-ಖ್ಯೆಯಲ್ಲಿ ಆತ್ಮ-ಹ-ತ್ಯೆ ಮಾಡಿ-ಕೊ-ಳ್ಳು-ವ-ವ-ರ ಸಂಖ್ಯೆ ಬೆಂಗ-ಳೂ-ರಿ-ನ-ಲ್ಲಿ 32 ರಷ್ಟಿ-ತ್ತು . ಈ ಪ್ರಮಾ-ಣ, 1999 ರಲ್ಲಿ 35ಕ್ಕೇರಿತು. ಆತ್ಮ-ಹ-ತ್ಯೆ ಮಾಡಿ-ಕೊ-ಳ್ಳು-ವ ಪ್ರತಿ-ಶ-ತ 60 ಜನ-ರು 18 ರಿಂದ 40 ವರ್ಷ-ದೊ-ಳ-ಗಿ-ರುವರು ಎಂದೂ ಅವರು ಹೇಳಿದ್ದಾರೆ.
ಕಳೆದ ವರ್ಷ ಈ ಬಗ್ಗೆ ಅಧ್ಯಯನ ನಡೆಸಿದ್ದ ಸ್ನೇ-ಹಾ ಲೈಫ್-ಲೈ-ನ್ ಸರ್ಕಾ-ರೇ-ತ-ರ ಸಂಸ್ಥೆ ಕೂಡ ಇದೇ ಅಂಕಿ ಅಂಶಗಳನ್ನು ನೀಡಿತ್ತು. ಬೆಂಗಳೂರು ಅತ್ಯಹತ್ಯೆ ನಗರಿಯಾಗುತ್ತಿದೆ ಎಂದು ಘೋಷಿಸಿತ್ತು. ಈಗ ಪ್ರತಿಷ್ಠಿತ ನಿಮ್ಹಾನ್ಸ್ ಸಂಸ್ಥೆಯ ಅಧ್ಯಯನವೂ ಇದನ್ನೇ ಪುನರುಚ್ಚರಿಸಿರುವ ಹಿನ್ನೆಲೆಯಲ್ಲಿ ಬೆಂಗಳೂರಿಗೆ ಆತ್ಯಹತ್ಯೆ ನಗರಿ ಎಂಬ ಪಟ್ಟ ಕಾಯಂ ಆಗುವ ಸಾಧ್ಯತೆಯೇ ಹೆಚ್ಚು.
ಮುಖಪುಟ / ಇವತ್ತು... ಈ ಹೊತ್ತು...
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications