Get Updates
Get notified of breaking news, exclusive insights, and must-see stories!

ಅಪರೂಪದ ಶಸ್ತ್ರ ಚಿಕಿತ್ಸೆ : ಸಂಜಯಗಾಂಧೀ ಆಸ್ಪತ್ರೆ ವೈದ್ಯರ ಸಾಧನೆ

ಬೆಂಗಳೂರು : ಅಪಘಾತದಲ್ಲಿ ಮುರಿದಿದ್ದ ಬಲಗಾಲನ್ನು ಕತ್ತರಿಸದೇ ವಿಧಿ ಇರಲಿಲ್ಲ. ಉತ್ತರ ಹಳ್ಳಿ ನಿವಾಸಿ, 40ರ ಪ್ರಾಯದ ಸೋಮೇಶ್‌ ತಮ್ಮ ಬಲಗಾಲನ್ನು ಕಳೆದುಕೊಳ್ಳಬೇಕಲ್ಲ ಎಂದು ಮರುಗುತ್ತಿದ್ದರು. ಯಾತನೆ ಅನುಭವಿಸುತ್ತಿದ್ದರು.

ಇವರ ನೆರವಿಗೆ ಬಂದ ಬೆಂಗಳೂರಿನ ಸಂಜಯಗಾಂಧೀ ಅಪಘಾತ ಆಸ್ಪತ್ರೆ ಮತ್ತು ಸಂಶೋಧನಾ ಸಂಸ್ಥೆಯ ವೈದ್ಯರು, ಅಪರೂಪದ ಶಸ್ತ್ರ ಚಿಕಿತ್ಸೆ ನಡೆಸಿ, ಕಾಲಿಗೆ ವೃತ್ತಾಕಾರದ ಸರಳು ಜೋಡಿಸಿ, ಮೂಳೆ ಉದ್ದ ಮಾಡುವ ಮೂಲಕ, ಕತ್ತರಿಸಲೇ ಬೇಕಿದ್ದ ಕಾಲು ಉಳಿಸಿದ ಸಾಧನೆ ಮಾಡಿದ್ದಾರೆ.

ಜನವರಿ ತಿಂಗಳಿನಲ್ಲಿ ಸೋಮೇಶ್‌ ಟ್ರ್ಯಾಕ್ಟರ್‌ನಿಂದ ಬಿದ್ದಾಗ, ಅವರ ಬಲಗಾಲು ಮುರಿದಿತ್ತು. ಸ್ಥಳೀಯ ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿದ್ದರು. ಆದರೆ, ಗಾಯ ಮಾಯದೆ, ಕೀವು ತುಂಬಿಕೊಂಡಿತು. ಮೂಳೆ ಕರಗತೊಡಗಿತು. ಸೋಮೇಶ್‌ ಹಾಸಿಗೆ ಹಿಡಿದರು. ಪರೀಕ್ಷಿಸಿದ ವೈದ್ಯರು ಇವರ ಕಾಲು ತುಂಡರಿಸದೆ ವಿಧಿಯೇ ಇಲ್ಲ ಎಂದರು.

ಆದರೆ, ಸಂಜಯಗಾಂಧೀ ಆಸ್ಪತ್ರೆಯ ವೈದ್ಯರಾದ ಡಾ. ಎಚ್‌.ಎಸ್‌. ಚಂದ್ರಶೇಖರ್‌, ಕಾಲಿಗೆ ವೃತ್ತಾಕಾರದ ಸರಳು ಜೋಡಿಸಿ ಮೂಳೆ ಬೆಳೆಸುವ ನಿರ್ಧಾರ ತಳೆದರು, ಈಗ ದಿನಕ್ಕೊಂದು ಮಿಲಿ ಮೀಟರ್‌ನಂತೆ ಮೂಳೆ ಬೆಳೆದಿದೆ. ಸೋಮೇಶ್‌ ಕಾಲು ಉಳಿದಿದೆ.

ಈ ಹೊಸ ಮಾದರಿ ಚಿಕಿತ್ಸೆಯಿಂದ ಪೊಲೀಯೋ, ಹುಟ್ಟಿನಿಂದಲೇ ಕಾಣಿಸಿಕೊಳ್ಳುವ ಮೂಳೆ ನ್ಯೂನತೆಗಳಿಗೂ ಸೂಕ್ತ ಚಿಕಿತ್ಸೆ ಮಾಡಬಹುದಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ಹೆಚ್ಚಿನ ವಿವರಗಳಿಗೆ ದೂರವಾಣಿ ಸಂಖ್ಯೆ 080- 6564516 ಅಥವಾ 6562822 ಸಂಪರ್ಕಿಸಬಹುದು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+