ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

20ರಿಂದ ಬರ ಪರಿಹಾರ ಕಾಮಗಾರಿ ವೀಕ್ಷಣೆಗೆಮುಖ್ಯಮಂತ್ರಿ ಪ್ರವಾಸ

By Staff
|
Google Oneindia Kannada News

ಬೆಂಗಳೂರು : ರಾಜ್ಯದಲ್ಲಿ ಬರ ಪರಿಹಾರ ಕಾಮಗಾರಿಗಳನ್ನು ಅನುಷ್ಠಾನಕ್ಕೆ ತರಲು ಹಾಗೂ ಬರಗಾಲದಿಂದ ಉಂಟಾಗಿರುವ ಸಮಸ್ಯೆಗಳನ್ನು ಎದುರಿಸಲು, ಸರ್ವ ಪಕ್ಷ ನಾಯಕರನ್ನೊಳಗೊಂಡ ಪರಿಹಾರ ಸಮಿತಿ ರಚಿಸುವ ಅಗತ್ಯ ಇಲ್ಲ ಎಂದು ರಾಜ್ಯದ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಹೇಳಿದ್ದಾರೆ.

ಭಾನುವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಿದ್ದ ಅವರು, ಬರದ ಬಗ್ಗೆ ಸ್ವತಃ ತಾವೇ ತೀವ್ರ ನಿಗಾ ವಹಿಸಿದ್ದು, ಪ್ರತ್ಯೇಕ ಸಮಿತಿ ರಚಿಸುವ ಅಗತ್ಯ ಇಲ್ಲ ಎಂದರು. ಆಗಸ್ಟ್‌ 20ರಿಂದ ಬರಗಾಲ ಪೀಡಿತ ಪ್ರದೇಶಗಳಿಗೆ ಭೇಟಿ ನೀಡುವುದಾಗಿಯೂ ಅವರು ತಿಳಿಸಿದರು.

20ರಂದು ದಾವಣಗೆರೆ, ಆನಂತರ ಬೀದರ್‌, ಗುಲ್ಬರ್ಗಾ ಹಾಗೂ ರಾಯಚೂರಿನಲ್ಲಿ ಪ್ರವಾಸ ಕೈಗೊಳ್ಳುವುದಾಗಿ ತಿಳಿಸಿದ ಕೃಷ್ಣ, ಬಿ.ಜೆ.ಪಿ. ಒತ್ತಾಯಿಸಿರುವಂತೆ ಬರ ಪರಿಹಾರ ಉಸ್ತುವಾರಿ ಸಮಿತಿಯಾಂದನ್ನು ರಚಿಸುವ ಅಗತ್ಯವೇ ಇಲ್ಲ ಎಂದು ಹೇಳಿದರು.

ಆಗ್ರಹ : ರಾಜ್ಯ ಎದುರಿಸುತ್ತಿರುವ ಬರಗಾಲ ಪರಿಸ್ಥಿತಿ ಹಿನ್ನೆಲೆಯಲ್ಲಿ ರಾಜ್ಯ ಮಟ್ಟದ, ಜಿಲ್ಲಾ ಮಟ್ಟದ, ತಾಲೂಕು ಮಟ್ಟದಲ್ಲಿ ಸರ್ವ ಪಕ್ಷಗಳ ಬರ ಪರಿಹಾರ ಸಮಿತಿಯಾಂದನ್ನು ರಚಿಸಿ, ಬರ ಪರಿಹಾರ ಕಾಮಗಾರಿಗಳ ಉಸ್ತುವಾರಿಯನ್ನು ಆ ಸಮಿತಿಗೆ ಒಪ್ಪಿಸಬೇಕು ಎಂದು ಶನಿವಾರ ಗುಲ್ಬರ್ಗಾದಲ್ಲಿ ಕೇಂದ್ರ ಸಚಿವ ಅನಂತ ಕುಮಾರ್‌ ಆಗ್ರಹಿಸಿದ್ದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಈ ಹೇಳಿಕೆ ನೀಡಿದ್ದಾರೆ.

ಈ ಮಧ್ಯೆ ಕೇಂದ್ರ ಸರಕಾರ ರಾಜ್ಯದ ಬರಗಾಲ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಸಾಕಷ್ಟು ನೆರವು ನೀಡಿದ್ದು, ಕಾಂಗ್ರೆಸ್‌ ನೇತೃತ್ವದ ಕರ್ನಾಟಕ ಸರಕಾರ ಇನ್ನು ಹೆಚ್ಚಿನ ನೆರವನ್ನು ಕೇಂದ್ರದಿಂದ ಬಯಸಬಾರದು ಎಂದು ಕೇಂದ್ರದ ಮತ್ತೊಬ್ಬ ಸಚಿವ ವಿ. ಶ್ರೀನಿವಾಸ ಪ್ರಸಾದ್‌ ಅಭಿಪ್ರಾಯಪಟ್ಟಿದ್ದಾರೆ.

ವಾರ್ತಾ ಸಂಚಯ
ಮುಖಪುಟ / ಕೃಷ್ಣಗಾರುಡಿಯ ಕನ್ನಡಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X