ಕರ್ನಾಟಕ ಪವರ್ ಕಾರ್ಪೊರೇಷನ್ ಲಿ.ಗೆ‘ಅತ್ಯುತ್ತಮ ನಿರ್ವಹಣಾ ಪ್ರಶಸ್ತಿ’
ಬೆಂಗಳೂರು : ಶ್ರೇಷ್ಠ ನಿರ್ವಹಣೆಗಾಗಿ ಬೆಂಗಳೂರು ಮೇನೇಜ್ಮೆಂಟ್ ಅಸೋಸಿಯೇಷನ್ ನೀಡುವ ‘ಅತ್ಯುತ್ತಮ ನಿರ್ವಹಣಾ ಪ್ರಶಸ್ತಿ’ಗೆ ಕರ್ನಾಟಕ ಪವರ್ ಕಾರ್ಪೊರೇಷನ್ ಲಿಮಿಟೆಡ್ (ಕೆಪಿಸಿಎಲ್) ಪಾತ್ರವಾಗಿದೆ.
ಕೆಪಿಸಿಎಲ್ನ ಕಾರ್ಯ ನಿರ್ವಾಹಕ ನಿರ್ದೇಶಕ ಜೋತಿ ರಾಮಲಿಂಗಮ್ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಬಿ.ಕೆ. ಚಂದ್ರಶೇಖರ್ ಅವರಿಂದ ಶುಕ್ರವಾರ ಪ್ರಶಸ್ತಿಯನ್ನು ಸ್ವೀಕರಿಸಿದರು. ಕೆಪಿಸಿಎಲ್ನ ಕಾರ್ಪೊರೇಟ್ ಸಂಸ್ಕೃತಿ, ಕೈಗಾರಿಕಾ ನೀತಿಗಳು ಹಾಗೂ ಮಾರಾಟ ದರದಲ್ಲಿನ ಪ್ರಗತಿಯನ್ನು ಗಮನಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ.
ಕೆಪಿಸಿಎಲ್ 1997-98 ರಲ್ಲಿ 139 ಕೋಟಿ ರುಪಾಯಿ, 1998-99 ರಲ್ಲಿ 135 ಕೋಟಿ ಹಾಗೂ 1999- 20001 ಇಸವಿಯಲ್ಲಿ 142 ಕೋಟಿ ರುಪಾಯಿ ಲಾಭ ಗಳಿಸಿರುವುದನ್ನು ಕೂಡ ಪ್ರಶಸ್ತಿಗೆ ಆಯ್ಕೆ ಮಾಡುವಲ್ಲಿ ಮಾನದಂಡವಾಗಿ ಬಳಸಲಾಗಿದೆ. ಕಳೆದ ಮೂರು ದಶಕಗಳಲ್ಲಿ ತನ್ನ ಉತ್ಪಾದನಾ ಶಕ್ತಿಯನ್ನು 746 ಮೆಗಾವ್ಯಾಟ್ಗಳಿಂದ 4003 ಮೆಗಾವ್ಯಾಟ್ಗಳಿಗೆ ಹೆಚ್ಚಿಸಿಕೊಂಡಿರುವ ಕೆಪಿಸಿಎಲ್, ಆದಾಯವನ್ನು 13 ಮಿಲಿಯನ್ನಿಂದ 19 ಸಾವಿರದ 430 ಮಿಲಿಯನ್ಗೆ ಹೆಚ್ಚಿಸಿಕೊಂಡಿದೆ.
(ಯುಎನ್ಐ)