ಕನ್ನಡ ಮೈಕ್ರೊಸಾಫ್ಟ್ ಆಪರೇಟಿಂಗ್ ಸಿಸ್ಟಮ್ಗೆ ಆ.13ರಂದು ಚಾಲನೆ
ಬೆಂಗಳೂರು: ಮೈಕ್ರೋ ಸಾಫ್ಟ್ ಕಾರ್ಪೊರೇಷನ್ ಸಿದ್ಧಪಡಿಸಿದ, ಕನ್ನಡ ಸೇರಿದಂತೆ 9 ಇತರ ಭಾರತೀಯ ಭಾಷೆಗಳಲ್ಲಿ ನ ಅಪರೇಟಿಂಗ್ ಸಿಸ್ಟಮ್ಸ್ ಆಗಸ್ಟ್ 13ರಿಂದ ಲಭ್ಯವಾಗಲಿದೆ.
ಹಿಂದಿ, ಕೊಂಕಣಿ, ತಮಿಳು ಭಾಷೆಗಳಲ್ಲಿ ವಿಂಡೋಸ್ - 2000ನ್ನು ಕಳೆದ ಫೆಬ್ರವರಿಯಲ್ಲಿ ಮೈಕ್ರೋಸಾಫ್ಟ್ ಕಾರ್ಪೊರೇಷನ್ ಬಿಡುಗಡೆ ಮಾಡಿತ್ತು. ಈಗ ಗುಜರಾತಿ, ಒರಿಯಾ, ತೆಲುಗು, ಪಂಜಾಬಿ ಮತ್ತು ಬಂಗಾಳಿ ಭಾಷೆಗಳಲ್ಲಿಯೂ ಮೈಕ್ರೋಸಾಫ್ಟ್ ಆಪರೇಟಿಂಗ್ ಸಿಸ್ಟಮ್ಸ್ ಗಳು ಲಭ್ಯವಾಗಲಿವೆ. ಈ ವಿಷಯವನ್ನು ಮಾಹಿತಿ ತಂತ್ರಜ್ಞಾನ ಖಾತೆ ಸಚಿವ ಪ್ರಮೋದ್ ಮಹಾಜನ್ ಅವರ ಸಮ್ಮುಖದಲ್ಲಿ ಘೋಷಿಸಲಾಗುವುದು .
ಪ್ರಸ್ತುತ ಮೂರು ವಿಧದ ಮೈಕ್ರೋಸಾಫ್ಟ್ ಆಪರೇಟಿಂಗ್ ಸಿಸ್ಟಮ್ಗಳಿವೆ. ಬಿಸಿನೆಸ್ಗೆ ಸಂಬಂಧಿಸಿ ಡೆಸ್ಕ್ಟಾಪ್ ಮತ್ತು ಲ್ಯಾಪ್ ಟಾಪ್, ಫೈಲ್ ಮತ್ತು ಪ್ರಿಂಟ್ ಸರ್ವರ್ಗಳು ಹಾಗೂ ಇ- ಕಾಮರ್ಸ್ ವ್ಯವಹಾರಗಳಿಗಾಗಿ ಆಧುನಿಕ ಮೈಕ್ರೋಸಾಫ್ಟ್ ಆಪರೇಟಿಂಗ್ ಸಿಸ್ಟಮ್ಗಳು. ಪ್ರಸ್ತುತ ಒಂದು ಬಿಲಿಯನ್ ಡಾಲರ್ ವೆಚ್ಚದಲ್ಲಿ ಮೂರು ವರ್ಷಗಳ ಅವಧಿಯಲ್ಲಿ ಅಧ್ಯಯನ ನಡೆಸಿ ರಚಿಸಿರುವ ಹೊಸ ಮಾದರಿಯ ಮೈಕ್ರೋ ಸಾಪ್ಟ್ ಸಿಸ್ಟಮ್ ಹೆಚ್ಚು ಸಾಮರ್ಥ್ಯ , ಬಾಳಿಕೆ ಹಾಗೂ ಸುರಕ್ಷೆಯನ್ನು ಹೊಂದಿದೆ.
ಸಾಮಾನ್ಯವಾಗಿ ವಿಂಡೋಸ್ ಸರ್ವರ್ ಗೆ 40 ಸಾವಿರರೂ ಹಾಗೂ ಅಪ್ಗ್ರೇಡೇಷನ್ಗೆ 20 ಸಾವಿರ ಖರ್ಚಾದರೆ, ವಿಂಡೋಸ್ ಪ್ರೊಫೆಶನಲ್ 10 ಸಾವಿರ ರೂ. ಬೆಲೆಯದ್ದಾಗಿದ್ದು, 5 ಸಾವಿರ ರೂಪಾಯಿಗಳಲ್ಲಿ ಅಪ್ಗ್ರೇಡೇಷನ್ ಮಾಡಬಹುದು ಎಂದು ಭಾರತದ ಮೈಕ್ರೋಸಾಫ್ಟ್ ನಿರ್ವಹಣಾ ನಿರ್ದೇಶಕ ಸಂಜಯ್ ಮಿರ್ಚಾಂದನಿ ಹೇಳಿದ್ದರು.
ಮೈಕ್ರೋಸಾಫ್ಟ್ ಬಹುಭಾಷಾ ಉಪಕರಣವು ಹಿಂದಿ ಸೇರಿದಂತೆ ಇತರ ಕೆಲವು ಭಾಷೆಗಳಲ್ಲಿ ಓದು, ಬರಹ ಮತ್ತು ಸಂಪಾದನೆಯ ಅವಕಾಶವನ್ನೂ ಕಲ್ಪಿಸುತ್ತದೆ. ಈಗಾಗಲೇ ಮೈಕ್ರೋಸಾಫ್ಟ್ ತನ್ನ ವಿಂಡೋಸ್-2000 ಪ್ಯಾಕೇಜ್ನಡಿಯಲ್ಲಿ ಹಿಂದಿ ಭಾಷೆಯಲ್ಲಿ ಎಂಎಸ್ ವರ್ಡ್ ಪ್ರೊಸೆಸಿಂಗ್ ಅಪ್ಲಿಕೇಷನ್ನ್ನು ಸಿದ್ಧಪಡಿಸಿದ್ದು ಇಲ್ಲಿ ವ್ಯಾಕರಣ ಮತ್ತು ಅಕ್ಷರಗಳ ತಪ್ಪನ್ನು ಸರಿಪಡಿಸಿಕೊಳ್ಳುವ ಸೌಲಭ್ಯವೂ ಇದೆ.
(ಇನ್ಫೋ ವಾರ್ತೆ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications