ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೀರಶೈವ ಸಂಸ್ಕೃತಿ ಪ್ರತಿಷ್ಠಾನದಿಂದ ಉದ್ಯೋಗ ಮಾಹಿತಿ ಕೇಂದ್ರ

By Staff
|
Google Oneindia Kannada News

ಬೆಂಗಳೂರು : ವೀರಶೈವ ಯುವ ಜನಾಂಗಕ್ಕೆ ವೃತ್ತಿ ತರಬೇತಿ, ಸ್ವಯಂ ಉದ್ಯೋಗ, ಶಿಕ್ಷಣ ಮಾರ್ಗದರ್ಶನವನ್ನು ನೀಡಲು ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅವರನ್ನು ಸಜ್ಜುಗೊಳಿಸುವ ಉದ್ದೇಶದ ವೀರಶೈವ ಉದ್ಯೋಗ ಮಾಹಿತಿ ಕೇಂದ್ರ ಆಗಸ್ಟ್‌ 10 ರಿಂದ ಕಾರ್ಯಾರಂಭ ಮಾಡಲಿದೆ.

ಉದ್ಯೋಗ ಮಾಹಿತಿ ಮಾತ್ರವಲ್ಲದೆ, ವೀರಶೈವ ಸಾಹಿತ್ಯ, ಸಂಸ್ಕೃತಿ ಕುರಿತಾದ ಮಾಹಿತಿಗಳನ್ನೂ ಕೇಂದ್ರ ಪೂರೈಸುವುದು. ಆಗಸ್ಟ್‌ 10 ರಂದು ನಡೆಯುವ ಸಮಾರಂಭದಲ್ಲಿ ಕನ್ನಡ ಸಂಸ್ಕೃತಿ ಸಚಿವೆ ರಾಣಿ ಸತೀಶ್‌ ಉದ್ಯೋಗ ಮಾಹಿತಿ ಕೇಂದ್ರವನ್ನು ಉದ್ಘಾಟಿಸುವರು.

ಆಸಕ್ತರು (080) 3429625 / 3326046/3467503 ದೂರವಾಣಿ ಸಂಖ್ಯೆಗಳಲ್ಲಿ ವೀರಶೈವ ಸಂಸ್ಕೃತಿ ಪ್ರತಿಷ್ಠಾನದ ಅಧ್ಯಕ್ಷ ಜಿ.ಬಿ. ರಾಜ್‌ ಅವರನ್ನು ಸಂಪರ್ಕಿಸಬಹದು.

ಆಗಸ್ಟ್‌ 15 ರಂದು ಲಿಂಗಾಯತ ವಧೂವರರ ಸಮಾವೇಶ

ಬೆಂಗಳೂರಿನ ರಾಜಾಜಿನಗರದ ಬಸವ ಮಂಟಪದಲ್ಲಿ ಆಗಸ್ಟ್‌ 15 ಸ್ವಾತಂತ್ರ್ಯ ದಿನದಂದು ಬೆಳಗ್ಗೆ 10.30 ರಿಂದ ಲಿಂಗಾಯತ ವಧೂವರರ ಸಮಾವೇಶ ಏರ್ಪಡಿಸಲಾಗಿದೆ. ಹೆಸರು ನೋಂದಾಯಿಸುವ ಆಸಕ್ತರು ಫೋಟೋಗಳೊಂದಿಗೆ ವಿವರಗಳನ್ನು ತರಬೇಕು. ಹೆಚ್ಚಿನ ವಿವರಗಳಿಗೆ- ಬಸವ ಮಂಟಪ, ನಂ.2035, 20 ನೇ ಮುಖ್ಯರಸ್ತೆ , 2 ನೇ ಬ್ಲಾಕ್‌, ಕಾರ್ಡ್‌ ರಸ್ತೆ , ರಾಜಾಜಿ ನಗರ, ಬೆಂಗಳೂರು. ದೂರವಾಣಿ ಸಂಖ್ಯೆ (080) 3325335/3322790.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X