Get Updates
Get notified of breaking news, exclusive insights, and must-see stories!

3 ವರ್ಷದಲ್ಲಿ 33 ಜವಳಿ ಕಾರ್ಖಾನೆಗೆ ಬೀಗ; 23,000 ಕಾರ್ಮಿಕರು ಮನೆಗೆ

ನವದೆಹಲಿ : ರಾಷ್ಟ್ರದ ಜವಳಿ ಉದ್ಯಮ ಭಾರಿ ಸಂಕಷ್ಟ ಎದುರಿಸುತ್ತಿದೆ. ಕಳೆದ ಮೂರು ವರ್ಷಗಳಿಂದ ಭಾರಿ ಹಿನ್ನಡೆಯನ್ನು ಅನುಭವಿಸಿದ ಜವಳಿ ಕ್ಷೇತ್ರದಲ್ಲಿ 33 ಕೈಗಾರಿಕೆಗಳು ಬಾಗಿಲು ಹಾಕಿವೆ. ಇದರಿಂದಾಗಿ ಸುಮಾರು 23 ಸಾವಿರ ಕಾರ್ಮಿಕರು ಕೆಲಸ ಕಳೆದುಕೊಂಡು ನಿರುದ್ಯೋಗಿಗಳಾಗಿದ್ದಾರೆ.

ಆರ್ಥಿಕ ಆಘಾತದಿಂದಾಗಿ 98-99ರ ಮೇ ಮತ್ತು ಜೂನ್‌ ತಿಂಗಳಿನಲ್ಲಿ 13 ಕೈಗಾರಿಕೆಗಳು, 99-2000ದ ಮೇ-ಜೂನ್‌ನಲ್ಲಿ 14 ಕೈಗಾರಿಕೆಗಳು ಹಾಗೂ 2000-01ನೇ ಮೇ ಹಾಗೂ ಜೂನ್‌ ತಿಂಗಳಲ್ಲಿ 6 ಕಾರ್ಖಾನೆಗಳು ಬಾಗಿಲು ಮುಚ್ಚಿವೆ.

ಈ 33 ಕಂಪನಿಗಳು ಕೈಗಾರಿಕೆ ಮತ್ತು ಆರ್ಥಿಕ ಪುನರ್‌ ನಿರ್ಮಾಣ ಮಂಡಳಿ (ಬಿಐಎಫ್‌ಆರ್‌)ನಲ್ಲಿ ತಮ್ಮ ಹೆಸರು ದಾಖಲಿಸಿ, ಇನ್ನೂ ಆಶಾಭಾವನೆಯಿಂದ ಕಾಯುತ್ತಿವೆ. ಕೇಂದ್ರ ಜವಳಿ ಸಚಿವಾಲಯದ ಅಂಕಿ ಅಂಶಗಳ ರೀತ್ಯ ತಮಿಳುನಾಡಿನ ಜವಳಿ ಉದ್ಯಮ ತೀವ್ರ ಸಂಕಷ್ಟದಲ್ಲಿದೆ. ಇತ್ತಿಚೆಗೆ ಬಾಗಿಲು ಹಾಕಿದ ಕೈಗಾರಿಕೆಗಳ ಪೈಕಿ ತಮಿಳುನಾಡು ಮೊದಲ ಸ್ಥಾನದಲ್ಲಿದೆ.

ತಮಿಳುನಾಡಿನ ಸುಮಾರು 4 ಸಾವಿರ ಕಾರ್ಮಿಕರು ಕೆಲಸ ಕಳೆದುಕೊಂಡಿದ್ದಾರೆ. ಉದಾರೀಕರಣ ನೀತಿ, ಕಾರ್ಮಿಕರ ಸಮಸ್ಯೆ, ಆರ್ಥಿಕ ಸಂಕಷ್ಟವೇ ಕೈಗಾರಿಕೆಗಳು ಮುಚ್ಚಲು ಕಾರಣವಾಗಿದೆ. ಆಂಧ್ರಪ್ರದೇಶದ ಐದು, ಮಹಾರಾಷ್ಟ್ರದ 4 ಜವಳಿ ಉದ್ದಿಮೆಗಳು ಬಾಗಿಲು ಮುಚ್ಚಿವೆ. ಮಿನರ್ವಾ ಮಿಲ್‌ ಸೇರಿದಂತೆ ಕರ್ನಾಟಕದ ಹಲವು ಜವಳಿ ಉದ್ದಿಮೆಗಳು ಸಂಕಷ್ಟದಲ್ಲಿವೆ.

ಬಿಹಾರ, ಒರಿಸ್ಸಾ ಮತ್ತು ಪಶ್ಚಿಮ ಬಂಗಾಳಗಳಲ್ಲಿ ಕೂಡ ಕಾರ್ಖಾನೆಗಳು ಮುಚ್ಚಿದ್ದು ತಲಾ 3 ಸಾವಿರ ಕಾರ್ಮಿಕರು ಕೆಲಸ ಕಳೆದುಕೊಂಡು ಬೀದಿ ಪಾಲಾಗಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+