ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಕಿಲಾರಿ ರಸ್ತೆ ಕನ್ನಡ ಅಭಿಮಾನಿಗಳಿಂದ ಆ.27ರಂದು ದೇಹದಾರ್ಢ್ಯ ಸ್ಪರ್ಧೆ
ಬೆಂಗಳೂರು : ಇಲ್ಲಿನ ಕಿಲಾರಿ ರಸ್ತೆ ಕನ್ನಡ ಅಭಿಮಾನಿಗಳ ಸಂಘವು ಆಗಸ್ಟ್ 27 ರಂದು ರಾಜ್ಯಮಟ್ಟದ ದೇಹದಾರ್ಢ್ಯ ಸ್ಪರ್ಧೆಯನ್ನು ಏರ್ಪಡಿಸಿದೆ. ವಿಜೇತರಿಗೆ ‘ಶ್ರೀ ಮಯೂರ 2001’ ಪ್ರಶಸ್ತಿ ನೀಡಿ ಗೌರವಿಸಲಾಗುವುದು.
ಕಿಲಾರಿ ರಸ್ತೆಯಲ್ಲಿನ ಕುಂಚಿಟಿಗರ ಶ್ರೀ ಆಂಜನೇಯ ಸ್ವಾಮಿ ಕಲ್ಯಾಣ ಮಂಟಪದಲ್ಲಿ ನಡೆಯಲಿರುವ ಈ ಸ್ಪರ್ಧೆಯಲ್ಲಿ 40 ವರ್ಷದವರಿಗಾಗಿ ಮಾಸ್ಟರ್ಸ್ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಆಸಕ್ತರು ಆಗಸ್ಟ್ 25 ರೊಳಗೆ 30 ರುಪಾಯಿ ಪ್ರವೇಶ ಶಲ್ಕದೊಂದಿಗೆ ಕೆಳಗಿನ ವಿಳಾಸವನ್ನು ಸಂಪರ್ಕಿಸಬಹುದು-
ನರೇಂದ್ರ, ಕಾರ್ಯದರ್ಶಿ, ಕಿಲಾರಿ ರಸ್ತೆ ಕನ್ನಡ ಅಭಿಮಾನಿಗಳ ಸಂಘ, ನಂ.12, 7 ನೇ ಅಡ್ಡರಸ್ತೆ, ಕಿಲಾರಿ ರಸ್ತೆ , ಬೆಂಗಳೂರು- 560053. ದೂರವಾಣಿ ಸಂಖ್ಯೆ- (080) 2200059 ಅಥವಾ (080) 2261005.
(ಇನ್ಫೋ ವಾರ್ತೆ)
Comments
Story first published: Tuesday, August 7, 2001, 0:00 [IST]