ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಳ್ಳಾರಿ:ಡಿಡಿ-2 ಚಾನೆಲ್‌ ರಿಲೇ ಸೆಂಟರ್‌ಗೆ ಸುಷ್ಮಾರಿಂದ ಕೆಸರು ಕಲ್ಲು

By Staff
|
Google Oneindia Kannada News

ಬಳ್ಳಾರಿ : ಮುಂದಿನ ವರ್ಷ ವರಲಕ್ಷ್ಮೀ ವ್ರತ ಆಚರಿಸಲು ಬಳ್ಳಾರಿಗೆ ಬರುವ ವೇಳೆಗೆ ಡಿಡಿ ರಿಲೇ ಸೆಂಟರ್‌ ಕಾರ್ಯನಿರ್ವಹಿಸುವಂತೆ ಮಾಡಲು ಎಲ್ಲ ರೀತಿಯ ಕ್ರಮ ತೆಗೆದುಕೊಳ್ಳುವುದಾಗಿ ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವೆ ಸುಷ್ಮಾ ಸ್ವರಾಜ್‌ ಹೇಳಿದ್ದಾರೆ.

ಶನಿವಾರ ನಡೆದ ಕಾರ್ಯಕ್ರಮದಲ್ಲಿ ದೂರದರ್ಶನ್‌- 2 ಚಾನೆಲ್‌ ರಿಲೇ ಸೆಂಟರ್‌ಗೆ ಕೆಸರು ಕಲ್ಲು ಹಾಕಿದ ನಂತರ ಮಾತನಾಡುತ್ತಿದ್ದ ಅವರು, ಇನ್ನೊಂದು ವರ್ಷದಲ್ಲಿ ಬಳ್ಳಾರಿಯಲ್ಲಿ ಎಫ್‌ಎಂ ಚಾನೆಲ್‌ ಆರಂಭಿಸುವ ಭರವಸೆ ನೀಡಿದರು. ನವೆಂಬರ್‌ನಲ್ಲಿ ನಡೆಯುವ ಹಂಪಿ ಉತ್ಸವಕ್ಕೆ ಆಗಮಿಸುವ ಸಂದರ್ಭದಲ್ಲಿ ಎಫ್‌ಎಂ ಸ್ಟೇಷನ್‌ಗೆ ತಾವೇ ಕೆಸರು ಕಲ್ಲು ಹಾಕುವ ಇಂಗಿತವನ್ನು ಸುಷ್ಮಾ ವ್ಯಕ್ತ ಪಡಿಸಿದರು. ಅಂದಹಾಗೆ, ರಾಜ್ಯದಲ್ಲಿ ಬೆಂಗಳೂರಿನ ನಂತರ ಡಿಡಿ ರಿಲೇ ಸೆಂಟರ್‌ ಹೊಂದಿರುವ ಎರಡನೇ ನಗರ ಎಂಬ ಖ್ಯಾತಿ ಬಳ್ಳಾರಿಗೆ ಸಲ್ಲುತ್ತದೆ.

ಬರ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಜಿಲ್ಲೆಗೆ ಪ್ರತ್ಯೇಕ ಎನ್‌ಡಿಎ ಪ್ಯಾಕೇಜ್‌ನ್ನು ಒದಗಿಸುವುದಾಗಿ ಈಗಾಗಲೇ ಪ್ರಕಟಿಸಿರುವ ಸುಷ್ಮಾ ಸ್ವರಾಜ್‌- ಈ ನಿಟ್ಟಿನಲ್ಲಿ ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವ ವೆಂಕಯ್ಯನಾಯ್ಡು ಅವರೊಂದಿಗೆ ಚರ್ಚಿಸಿದ್ದು, ಮುಖ್ಯಮಂತ್ರಿ ಮತ್ತು ಪ್ರಧಾನಿಯಾಂದಿಗೆ ಮಾತುಕತೆ ನಡೆಸುವುದಾಗಿ ಪುನರುಚ್ಛರಿಸಿದರು. ಇದೇ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭಾ ಸದಸ್ಯ ಕೆ.ಸಿ. ಕೊಂಡಯ್ಯ ಬಳ್ಳಾರಿ ಜಿಲ್ಲೆಗೆ ಸುಷ್ಮಾ ಸ್ವರಾಜ್‌ ತೋರಿದ ಅಕ್ಕರೆಯನ್ನು ಶ್ಲಾಘಿಸಿದರು.

(ಇನ್ಫೋ ವಾರ್ತೆ)

ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X