ಸ್ವಾತಂತ್ರ್ಯಚಳವಳಿ-ಲೋಹಿಯಾ ಸ್ಮೃತಿಗಳ ಸೆಂಟ್ರಲ್ ಜೈಲ್ ಸ್ಥಳಾಂತರ
ಬೆಂಗಳೂರು : ಬಿಗಿ ಪೊಲೀಸ್ ಬಂದೋಬಸ್ತ್ ನಡುವೆ 1183 ಕೈದಿಗಳನ್ನು ಲಗೇಜು ಸಮೇತ ಸ್ಥಳಾಂತರಿಸುವ ಮೂಲಕ, ಐತಿಹಾಸಿಕ ಸೆಂಟ್ರಲ್ ಜೈಲನ್ನು (ಕೇಂದ್ರ ಕಾರಾಗೃಹ) ನಗರದ ಹೊರವಲಯದ ಪರಪ್ಪನ ಅಗ್ರಹಾರ ಜೈಲಿಗೆ ಸ್ಥಳಾಂತರಿಸುವ ಕಾರ್ಯ ಹೆಚ್ಚೂ ಕಡಿಮೆ ಪೂರ್ಣಗೊಂಡಿದೆ.
ಸರ್ಕಾರದ ಆದೇಶದ ಮೇರೆಗೆ ಕಳೆದ ಕೆಲವು ದಿನಗಳಿಂದ ಜೈಲಿನ ಸ್ಥಳಾಂತರ ಕಾರ್ಯ ನಡೆಯುತ್ತಿದೆ ಎಂದು ಶನಿವಾರ ಜೈಲಿನ ಅಧೀಕ್ಷಕ ಪಿ.ಎನ್.ಜಯಸಿಂಹ ಸುದ್ದಿಗಾರರಿಗೆ ತಿಳಿಸಿದರು. ಮೊದಲಿಗೆ ಜೈಲಿನಲ್ಲಿದ್ದ ಕಾರ್ಖಾನೆಗಳು, ನಂತರದಲ್ಲಿ ಕೈದಿಗಳನ್ನು ಸ್ಥಳಾಂತರಿಸಲಾಯಿತು ಎಂದರು.
ಪ್ರಸ್ತುತ 3000 ಕೈದಿಗಳು ಪರಪ್ಪನ ಅಗ್ರಹಾರ ಜೈಲಿನಲ್ಲಿ ಆಶ್ರಯ ಪಡೆದಿದ್ದು , ಉಳಿದ 400 ಕೈದಿಗಳು ಭಾನುವಾರ ಹೊಸ ಜೈಲಿನ ಆಶ್ರಯಕ್ಕೆ ಬರುವರು. ಇದರಿಂದಾಗಿ, ಆಗಸ್ಟ್ 5 (ಭಾನುವಾರ) ರಿಂದ ಸೆಂಟ್ರಲ್ ಜೈಲ್ ಸಂಪೂರ್ಣ ತೆರವಾಗಲಿದೆ.
ಸೆಂಟ್ರಲ್ ಜೈಲ್ ಮುಂದೇನು ?
ತೆರವಾಗುವ ಕೇಂದ್ರ ಕಾರಾಗೃಹವನ್ನು ಸರ್ಕಾರ ಮುಂದೇನು ಮಾಡುತ್ತದೆ ಅನ್ನುವ ಪ್ರಶ್ನೆ ಸದ್ಯಕ್ಕೆ ಬಗೆಹರಿದಿಲ್ಲ . ಕೆಲವರು ಕಾರಾಗೃಹವನ್ನು ಉದ್ಯಾನವಾಗಿ ಪರಿವರ್ತಿಸಿ ಎಂದು ಸರ್ಕಾರವನ್ನು ಒತ್ತಾಯಿಸುತ್ತಿದ್ದರೆ, ಇನ್ನೂ ಕೆಲವರು ವಸ್ತು ಪ್ರದರ್ಶನಾಲಯವನ್ನಾಗಿ ಪರಿವರ್ತಿಸಲು ಆಗ್ರಹಿಸುತ್ತಿದ್ದಾರೆ. ಎರಡೂ ಪ್ರಸ್ತಾವನೆಗಳನ್ನು ಟೇಬಲ್ ಮೇಲಿಟ್ಟುಕೊಂಡಿರುವ ಸರ್ಕಾರ ಇನ್ನೂ ತನ್ನ ಮೌನ ಮುರಿದಿಲ್ಲ .
ಅಂದಹಾಗೆ- ಈ ಜೈಲು ದೇಶದ ಹಿರಿಯ ಸ್ವಾತಂತ್ರ್ಯ ಹೋರಾಟಗಾರರಿಗೆ ಹಾಗೂ ಲೋಹಿಯಾ ವಾದಿಗಳಿಗೆ ಆಶ್ರಯ ನೀಡಿತ್ತು .
(ಇನ್ಫೋ ವಾರ್ತೆ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications