ಆಗಸ್ಟ್ನಲ್ಲಿ ಚುರುಕಾದ ಮಳೆ : ರೈತರ ಮುಖದಲ್ಲಿ ಚಿಮ್ಮಿದ ಮಂದಹಾಸ
ಬೆಂಗಳೂರು : ಆಗಸ್ಟ್ನಲ್ಲೂ ಮಳೆ ಬರುವುದು ಕಷ್ಟ ಎಂದು ಖಂಡತುಂಡವಾಗಿ ಹೇಳಿದ್ದ ಹವಾಮಾನ ಇಲಾಖೆಯ ವರದಿಗಳನ್ನು ಸುಳ್ಳಾಗಿಸುವಂತೆ ವರಮಹಾಲಕ್ಷ್ಮೀ ಹಬ್ಬದ ದಿನದಿಂದ ರಾಜ್ಯದಲ್ಲಿ ಮುಂಗಾರು ಬಲಗೊಳ್ಳುತ್ತಿದೆ.
ಮಳೆಯ ಸುಳಿವೇ ಕಾಣದ ಊರುಗಳಲ್ಲೂ ಮಳೆ ಆಗುತ್ತಿದೆ. ರೈತರ ಕಣ್ಣುಗಳಲ್ಲಿ ಭರವಸೆಯ ಮಿಂಚುಗಳು ಹೊಳೆಯುತ್ತಿವೆ. ಬಳ್ಳಾರಿ, ಹಾಸನ, ಬಸವಕಲ್ಯಾಣ, ಹುಬ್ಬಳ್ಳಿ, ಧಾರವಾಡ, ಬೆಳಗಾವಿಗಳಲ್ಲಿ ಮಳೆ ಆಗಿದೆ. ಅನಿರೀಕ್ಷಿತವಾಗಿ ಮೋಡ ಮುಸುಕಿ, ಸುರಿದ ಮಳೆಯಿಂದ ರೈತರು ಹರ್ಷಚಿತ್ತರಾಗಿದ್ದಾರೆ. ಧಾನ್ಯಲಕ್ಷ್ಮೀ ತಮಗೆ ಒಲಿದೇ ಒಲಿಯುತ್ತಾಳೆ. ವರಮಹಾಲಕ್ಷ್ಮೀ ಹಬ್ಬದ ಶುಕ್ರವಾರ ತಮಗೆ ಶುಭ ಶುಕ್ರವಾರವಾಗಿ ಪರಿಣಮಿಸಿದೆ ಎಂದು ಆನಂದದಿಂದ ನುಡಿದಿದ್ದಾರೆ.
ಬೆಳಗಾವಿ : ಉತ್ತರ ಕರ್ನಾಟಕದಲ್ಲಿ ಮಳೆ ಆರಂಭವಾಗಿರುವುದರಿಂದ ಬರಗಾಲದಿಂದ ತತ್ತರಿಸಿದ್ದ ಜನತೆಯ ಮುಖದಲ್ಲಿ ಮಂದಹಾಸ ಮೂಡಿದೆ. ಮುಂದಿನ ದಿನದಲ್ಲಿ ಕುಡಿಯುವ ನೀರಿಗೂ ಪರಿತಪಿಸುವ ಸ್ಥಿತಿ ಬರುತ್ತದೆಂದು ಭೀತರಾಗಿದ್ದ ಜನರು ಈಗ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
ಉತ್ತರ ಕರ್ನಾಟಕದ ಕೆಲವೆಡೆ ಹಸಿ ಮಳೆ ಆದ ವರದಿಗಳು ಬಂದಿವೆ. ಗದಗ ಜಿಲ್ಲೆಯಾದ್ಯಂತ ಆಗಸ್ಟ್ನಲ್ಲಿ ಮಳೆ ಆರಂಭವಾಗಿದ್ದು, ಒಟ್ಟಾರೆ 240.8 ಮಿ.ಮೀಟರ್ ಮಳೆ ಸುರಿದಿದೆ. ಗುರುವಾರ ಬಾಗಲಕೋಟೆ ಜಿಲ್ಲೆಯಲ್ಲಿ 3 ಸೆಂಟಿ ಮೀಟರ್ನಷ್ಟು ಮಳೆಯಾಗಿದೆ. ಶುಕ್ರವಾರ ಕೂಡ ಇಲ್ಲಿ ಮಳೆ ಸುರಿದಿದೆ. ಈಗ ರೈತರು ಜೋಳದ ಬಿತ್ತನೆಯ ಸಿದ್ಧತೆಯಲ್ಲಿ ತೊಡಗಿದ್ದಾರೆ.
ಬಳ್ಳಾರಿ : ಕಳೆದ ಎರಡು ತಿಂಗಳಿನಿಂದ ಇತ್ತ ಸುಳಿಯದಿದ್ದ ಮಳೆರಾಯ ಶುಕ್ರವಾರ ಜಿಲ್ಲೆಗೆ ಕಾಲಿಟ್ಟಿದ್ದಾನೆ. ಕೊಟ್ಟೂರು, ಕೂಡ್ಲಿಗಿಯಲ್ಲೂ ಮಳೆ ಸುರಿಸಿದ್ದಾನೆ. ಬಸವ ಕಲ್ಯಾಣ ತಾಲೂಕಿನಲ್ಲೂ ಕಳೆದೆರಡು ದಿನದಿಂದ ಮಳೆ ಆಗುತ್ತಿದೆ. ಮುಂಗಾರು ಕೈಕೊಟ್ಟರೂ ಹಿಂಗಾರು ಹಂಗಾಮಿನ ಬೆಳೆ ಬಂದೀತೆಂಬ ಆಶಾಭಾವನೆ ಈಗ ರೈತರದಾಗಿದೆ.
ಮಡಿಕೇರಿ: ಕಾವೇರಿ ಜಲಾನಯನ ಪ್ರದೇಶದಲ್ಲೂ ಮಳೆ ಚುರುಕಾಗಿದ್ದು, ಕೆ.ಆರ್.ಎಸ್.ಗೆ ನೀರು ಬರುವ ಲಕ್ಷಣಗಳೂ ಕಂಡುಬಂದಿವೆ. ಭಾಗಮಂಡಲದಲ್ಲಿ ಗುರುವಾರ 102.4 ಮಿ.ಮೀಟರ್ ಮಳೆ ಆಗಿದೆ.
ಹುಬ್ಬಳ್ಳಿ : ಗುರುವಾರ ಸಂಜೆಯಿಂದಲೇ ಹುಬ್ಬಳ್ಳಿಯಲ್ಲಿ ಸೋನೆ ಮಳೆ ಆರಂಭವಾಗಿದೆ. ಬಾದಾಮಿ, ಗುಳೇದಗುಡ್ಡ ಮೊದಲಾದ ಕಡೆಗಳಲ್ಲೂ ಮಳೆ ಸಣ್ಣಗೆ ಮಳೆ ಸುರಿಯುತ್ತಿದೆ. ಧಾರವಾಡ, ಕೊಪ್ಪಳ, ಬಿಜಾಪುರಗಳಲ್ಲಿ ಯೂ ಮಳೆ ಸುಳಿದಿದೆ. ಶೇಂಗಾ, ತರಕಾರಿ, ಮೆಣಸಿನಕಾಯಿ ಬಿತ್ತನೆ ಆರಂಭವಾಗಿದೆ.
ಕಾರವಾರ : ಉತ್ತರ ಕನ್ನಡದಲ್ಲೂ ಮಳೆ ಚುರುಕಾಗಿದ್ದು, ಕಾರವಾರದಲ್ಲಿ 122.3 ಮಿ.ಮೀಟರ್ ಮಳೆ ಆಗಿದೆ. ಘಟ್ಟಪ್ರದೇಶದಲ್ಲಿ ಮಾತ್ರ ಮಳೆಯ ಪ್ರಮಾಣ ಕಡಿಮೆ ಇದೆ.
ಹಾಸನ : ಆಗಸ್ಟ್ 1ರಿಂದ ಜಿಲ್ಲೆಯಾದ್ಯಂತ ಅಲ್ಲಲ್ಲಿ ಮಳೆ ಚುರುಕಾಗಿದೆ. ಬೇಲೂರು, ಗೆಂಡೆಹಳ್ಳಿ, ಅರೆ ಹಳ್ಳಿಯಲ್ಲಿ ತಲಾ 3 ಸೆಂಟಿ ಮೀಟರ್ನಷ್ಟು ಮಳೆಯಾಗಿದೆ. ಕಣಕಟ್ಟೆಯಲ್ಲಿ 15 ಮಿ.ಮೀಟರ್ ಮಳೆ ಬಿದ್ದಿದೆ. ಬೆಂಗಳೂರಿನ ಅಲ್ಲಲ್ಲಿ ಕೂಡ ಮಳೆ ಆಗುತ್ತಿದೆ.
ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications