ಶಾಲಾ ಮಕ್ಕಳಿಗೆ ಐ.ಟಿ. ಶಿಕ್ಷಣ ನೀಡಲು ಇಂಟೆಲ್ ಆಸಕ್ತಿ :ಕೃಷ್ಣ
ಬೆಂಗಳೂರು : ರಾಜ್ಯದ ಶಾಲಾ ಮಕ್ಕಳಿಗೆ ಮಾಹಿತಿ ತಂತ್ರಜ್ಞಾನ ಶಿಕ್ಷಣ ನೀಡಲು ಅನುಕೂಲವಾಗುವಂತೆ ಮೊದಲು ಶಿಕ್ಷಕರಿಗೆ ಸೂಕ್ತ ತರಬೇತಿ ನೀಡಲು ಸಿಇಓ ಇಂಟೆಲ್ ಏಷ್ಯಾ ಎಲೆಕ್ಟ್ರಾನಿಕ್ಸ್ ಮುಂದೆಬಂದಿದೆ ಎಂದು ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಹೇಳಿದ್ದಾರೆ.
ಶುಕ್ರವಾರ ತಮ್ಮ ಅಧಿಕೃತ ನಿವಾಸದಲ್ಲಿ ಇಂಟೆಲ್ ಅಧ್ಯಕ್ಷ ಕ್ರೆಗ್ ಬ್ಯಾರೆಟ್ ಮತ್ತು ತಂಡದೊಂದಿಗೆ ಉಪಹಾರ ಸಭೆಯಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ಚರ್ಚಿಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಿದ್ದ ಅವರು, ಇಂಟೆಲ್ ಸಂಸ್ಥೆ ಶಿಕ್ಷಕರಿಗೆ ಮಾಹಿತಿ ತಂತ್ರಜ್ಞಾನದ ಅರಿವು ಮೂಡಿಸಲು ಮತ್ತು ರಾಜ್ಯ ಸರಕಾರದೊಂದಿಗೆ ಸಮಗ್ರ ತರಬೇತಿ ರೂಪಿಸಲು ಆಸಕ್ತಿ ತಳೆದಿದೆ ಎಂದರು.
ರಾಜ್ಯದಲ್ಲಿ ಅದರಲ್ಲೂ ಏಷ್ಯಾದ ಸಿಲಿಕಾನ್ ವ್ಯಾಲಿ ಎಂದೇ ಖ್ಯಾತವಾಗಿರುವ ಬೆಂಗಳೂರಿನಲ್ಲಿ ಆಗಿರುವ ಮಾಹಿತಿ ತಂತ್ರಜ್ಞಾನದ ಅಭಿವೃದ್ಧಿಯ ಬಗ್ಗೆ ತಂಡ ಸಂಪೂರ್ಣ ಮೆಚ್ಚುಗೆ ವ್ಯಕ್ತಪಡಿಸಿತು. ಮಿಗಿಲಾಗಿ ರಾಜ್ಯದಲ್ಲಿ ಬಂಡವಾಳ ಹೂಡಲೂ ಸಂಸ್ಥೆ ಆಸಕ್ತಿ ಹೊಂದಿದೆ ಎಂದು ಕೃಷ್ಣ ವಿವರಿಸಿದರು.
ವಾರ್ತಾ
ಸಂಚಯ
ಮುಖಪುಟ
/
ಕೃಷ್ಣಗಾರುಡಿಯ
ಕನ್ನಡಿ