ಇ-ವಾಣಿಜ್ಯ ಸಲ್ಯುಷನ್ಸ್ಗೆ ‘ಇನ್ಫೋಸಿಸ್-ಇಂಟೆಲ್’ ಪ್ರಯೋಗಾಲಯ
ಬೆಂಗಳೂರು : ಇಂಟೆಲ್ ಕಾರ್ಪೊರೇಷನ್ನ ಅಧ್ಯಕ್ಷ ಹಾಗೂ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಕ್ರೇಗ್ ಬ್ಯಾರೆಟ್ ಇನ್ಫೋಸಿಸ್ ಆವರಣದಲ್ಲಿ ಇನ್ಫೋಸಿಸ್- ಇಂಟೆಲ್ ಇ- ವಾಣಿಜ್ಯ ಸಲ್ಯುಷನ್ಸ್ ಪ್ರಯೋಗಾಲಯವನ್ನು ಶುಕ್ರವಾರ ಉದ್ಘಾಟಿಸಿದರು.
ಎರಡು ದಿನಗಳ ಕಾಲದ ಬೆಂಗಳೂರಿನ ತಮ್ಮ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರೊಂದಿಗಿನ ಉಪಹಾರ ಸಭೆಯಾಂದಿಗೆ ಬ್ಯಾರೆಟ್ ಪ್ರಾರಂಭಿಸಿದರು. ಒಂದು ತಾಸು ಕಾಲದ ಈ ಭೇಟಿಯಲ್ಲಿ ಕೃಷ್ಣ ಹಾಗೂ ಬ್ಯಾರೆಟ್ ನಡುವೆ ಮಾಹಿತಿ ತಂತ್ರಜ್ಞಾನ ಕ್ಷೇತ್ರಕ್ಕೆ ಸಂಬಂಧಿಸಿದಂತೆ ವಿಚಾರ ವಿನಿಮಯ ನಡೆಯಿತು.
‘ಇನ್ಫೋಸಿಸ್- ಇಂಟೆಲ್’ ಇ- ವಾಣಿಜ್ಯ ಸಲ್ಯುಷನ್ಸ್ಗೆ ಸಂಬಂಧಿಸಿದ ಮೊದಲ ಪ್ರಯೋಗಾಲಯವಿದು. ಇಂಟೆಲ್ ವಿನ್ಯಾಸದ ಆಧಾರದಲ್ಲಿ ಇದು ಕಾರ್ಯ ನಿರ್ವಹಿಸಲಿದೆ. ಸಾಫ್ಟ್ವೇರ್ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಪ್ರಯೋಗಾಲಯಗಳ ಗುಣಗಳನ್ನೂ ಇದು ಹುದುಗಿಸಿಟ್ಟುಕೊಂಡಿದೆ ಎಂದು ಬ್ಯಾರೆಟ್ ಹೇಳಿದರು.
ಉತ್ತರದಾಯಿಕವಾಗಿ ಬಂದ ಸಂಪತ್ತನ್ನು ಬಳಸಿಕೊಂಡು ಇಂಟೆಲ್ ಪ್ಲಾಟ್ ಫಾರ್ಮ್ನಂಥವುಗಳನ್ನು ಸ್ಥಾಪಿಸಲು ಕಂಪನಿಗಳಿಗೆ ಅನುವು ಮಾಡಿಕೊಡುವ ಲೆಗಾಕಾಮ್ ಸರ್ವಿಸ್ಗೆ ಬ್ಯಾರೆಟ್ ಚಾಲನೆ ನೀಡಿದರು. ಇ- ವಾಣಿಜ್ಯ ಸಲ್ಯುಷನ್ಸ್ ಒದಗಿಸುವ ಯೋಜನೆಯಲ್ಲಿ ಇಂಟೆಲ್ ಪ್ಲಾಟ್ಫಾರ್ಮ್ ಹಾಗೂ ಆರ್ಕಿಟೆಕ್ಚರ್ ಮೂಲದಲ್ಲಿ ಇನ್ಫೋಸಿಸ್ ಕಾರ್ಯ ನಿರ್ವಹಿಸಲಿದೆ.
ಇಂಟೆಲ್ ಜೊತೆ ಕೈಜೋಡಿಸುವ ವಿಶೇಷ ಅವಕಾಶ ನಮ್ಮ ಕಂಪನಿಗೆ ಸಿಕ್ಕಿರುವುದು ಸಂತೋಷ ತಂದಿದೆ ಎಂದು ಇನ್ಫೋಸಿಸ್ ಅಧ್ಯಕ್ಷ ಎನ್.ಆರ್.ನಾರಾಯಣ ಮೂರ್ತಿ ಹೇಳಿದರು.
ತಂತ್ರಜ್ಞಾನದಲ್ಲಿ ವಿನ್ಯಾಸ ಹಾಗೂ ಅಭಿವೃದ್ಧಿಗೆ ಪೂರಕವಾದ ತ್ವರಿತ ಸೇವೆಯನ್ನು ‘ಇನ್ಫೋಸಿಸ್- ಇಂಟೆಲ್’ ಒದಗಿಸಲಿದೆ. ಕಂಪನಿಗಳ ಸರ್ವತೋಮುಖ ಪ್ರಗತಿಯಗೇ ನಮ್ಮ ಒತ್ತು ಎಂದು ಬ್ಯಾರೆಟ್ ತಿಳಿಸಿದರು.
(ಯುಎನ್ಐ)
ವಾರ್ತಾ ಸಂಚಯ
ಮುಖಪುಟ / ಕರ್ನಾಟಕ ಸಿಲಿಕಾನ್ ಕಣಿವೆ
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications