ಗೋಪಿಗೆ ರಾಜೀವ್ ಖೇಲ್ ರತ್ನ, ವೆಂಕಟೇಶ್ ಪ್ರಸಾದ್ಗೆ ಅರ್ಜುನ
ನವದೆಹಲಿ : ಕರ್ನಾಟಕದ ಕ್ರಿಕೆಟಿಗ ವೆಂಕಟೇಶ ಪ್ರಸಾದ್, ಈಜುಗಾರ ಜೆ.ಅಭಿಜಿತ್, ಕಬಡ್ಡಿ ಪಟು ಸಿ.ಹೊನ್ನಪ್ಪ ಹಾಗೂ ಅಥ್ಲೀಟ್ ಮಿಲ್ಕಾಸಿಂಗ್ (ಜೀವಮಾನದ ವಿಶಿಷ್ಟ ಸೇವೆಗಾಗಿ) ಅರ್ಜುನ ಪ್ರಶಸ್ತಿಗೆ ಆಯ್ಕೆಯಾಗಿರುವ 30 ಕ್ರೀಡಾಪಟುಗಳ ಪೈಕಿ ಸೇರಿದ್ದಾರೆ. ಅಖಿಲ ಇಂಗ್ಲೆಂಡ್ ಬ್ಯಾಡ್ಮಿಂಟನ್ ಚಾಂಪಿಯನ್,ಭಾರತದ ಪುಲ್ಲೇಲ ಗೋಪಿಚಂದ್ ಅವರನ್ನು ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಗೆ ಆರಿಸಲಾಗಿದೆ.
ದ್ರೋಣ ಪ್ರಶಸ್ತಿಗೆ ಐವರು ತರಪೇತುದಾರರನ್ನು ಆಯ್ಕೆ ಮಾಡಲಾಗಿದೆ. ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಯು 3 ಲಕ್ಷ ರುಪಾಯಿ, ಅರ್ಜುನ ಪ್ರಶಸ್ತಿ 1.5 ಲಕ್ಷ ರುಪಾಯಿ ಹಾಗೂ ದ್ರೋಣಚಾರ್ಯ ಪ್ರಶಸ್ತಿ 2.5 ಲಕ್ಷ ರುಪಾಯಿ ನಗದು ಪುರಸ್ಕಾರ ಒಳಗೊಂಡಿದೆ.
ಕ್ರೀಡಾ ಕ್ಷೇತ್ರಕ್ಕೆ ತಮ್ಮ ಜೀವಮಾನದಲ್ಲಿ ಸಲ್ಲಿಸಿರುವ ವಿಶಿಷ್ಟ ಸೇವೆಗಾಗಿ 15 ಕ್ರೀಡಾ ಪಟುಗಳನ್ನು ಅರ್ಜುನ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಈ ತಿಂಗಳ 29ರಂದು ರಾಷ್ಟ್ರಪತಿ ಭವನದಲ್ಲಿ ನಡೆಯಲಿರುವ ಸಮಾರಂಭದಲ್ಲಿ ರಾಷ್ಟ್ರಪತಿ ಕೆ.ಆರ್.ನಾರಾಯಣ್ ಪ್ರಶಸ್ತಿಗಳನ್ನು ಪ್ರದಾನ ಮಾಡುವರು.
ಅರ್ಜುನ ಪ್ರಶಸ್ತಿಗೆ ಆಯ್ಕೆಯಾಗಿರುವವರು : ವೆಂಕಟೇಶ ಪ್ರಸಾದ್ (ಕ್ರಿಕೆಟ್), ಬೀನಾಮೋಲ್ (ಅಥ್ಲೆಟಿಕ್ಸ್), ಬಲ್ಜೀತ್ ಸಿಂಗ್ ಸೈನಿ ಹಾಗೂ ಟಿಂಗೊಲಿಮ ಚಾನು (ಹಾಕಿ), ಅಭಿನವ್ ಬಿಂದ್ರಾ (ಶೂಟಿಂಗ್), ಸೆಬಾಸ್ಟಿಯನ್ ಕ್ಸೇವಿಯರ್ ಹಾಗೂ ಜೆ.ಅಭಿಜಿತ್ (ಈಜು), ರಣಧೀರ್ ಸಿಂಗ್ ಕೃಪಾಶಂಕರ್ ಪಟೇಲ್ (ಕುಸ್ತಿ), ಜಾರ್ಜ್ ಥಾಮಸ್ (ಬ್ಯಾಡ್ಮಿಂಟನ್), ಸಿ.ಹೊನ್ನಪ್ಪ (ಕಬಡ್ಡಿ), ಸನಮಾಚ ಚಾನು (ವೇಟ್ ಲಿಫ್ಟಿಂಗ್), ಎಸ್. ವಿಜಯಲಕ್ಷ್ಮಿ (ಚೆಸ್).
ಜೀವಮಾನದ ವಿಶೇಷ ಸಾಧನೆಗಾಗಿ- ಕಲ್ಪನಾ ದೇವನಾಥ್ (ಜಿಮ್ನಾಸ್ಟಿಕ್), ಗುರ್ಬೀರ್ ಸಿಂಗ್ ಸಂದು (ಶೂಟಿಂಗ್), ಕೆ.ಡಿ.ಜಾಧವ್ ಹಾಗೂ ನರೇಶ್ ಕುಮಾರ್ (ಕುಸ್ತಿ), ಆರ್.ಎಸ್.ಭೋಲಾ, ಬಾಲ್ ಕಿಷನ್ ಸಿಂಗ್, ಜಲಾಲುದ್ದೀನ್ ರಿಜ್ವಿ ಹಾಗೂ ಮಧು ಯಾದವ್ (ಹಾಕಿ), ಪಿ.ವಿ.ರಾಮಣ್ಣ (ವಾಲಿಬಾಲ್), ಅಖ್ತರ್ ಅಲಿ (ಟೆನಿಸ್), ಮಿಲ್ಕಾ ಸಿಂಗ್, ರಚನಾ ಗೋವಿಲ್ ಹಾಗೂ ವಿಜಯ್ ಮಾಲಾ ಭಾನೋಟ್ (ಅಥ್ಲೆಟಿಕ್ಸ್), ಜೋಗಿಂದರ್ ಸಿಂಗ್ ಬೇಡಿ (ಅಂಗವಿಕಲರ ಅಥ್ಲೆಟಿಕ್ಸ್), ಸುರೇಶ್ ಸಿಂಗ್ ಕನ್ವಾಸಿ (ರೋಯಿಂಗ್).
ದ್ರೋಣಾಚಾರ್ಯ ಪ್ರಶಸ್ತಿಗೆ ಆಯ್ಕೆಯಾಗಿರುವವರು : ಗುರ್ ದಯಾಳ್ ಸಿಂಗ್ (ಹಾಕಿ), ಹಂಸ ಶರ್ಮಾ (ವೇಟ್ ಲಿಫ್ಟಿಂಗ್), ಮಹಮ್ಮದ್ ಆರಿಫ್ (ಬ್ಯಾಡ್ಮಿಂಟನ್), ಗೋಪಾಲ ಫಡ್ಕೆ (ಕೋಕೋ), ಭೂಪೇಂದರ್ ಧವನ್ (ಪವರ್ ಲಿಫ್ಟಿಂಗ್).
(ಇನ್ಫೋ ವಾರ್ತೆ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications