ಪಿರಿಯಾಪಟ್ಟಣದ ಬೈಲುಕುಪ್ಪೆಯಲ್ಲಿ ಶಾರುಖ್ ಖಾನ್
ಮೈಸೂರು : ಪಿರಿಯಾಪಟ್ಟಣ ತಾಲ್ಲೂಕಿನ ಬೈಲುಕುಪ್ಪೆ ಬುಧವಾರ ರಂಗೇರಿತ್ತು. ಧರ್ಮ ಗುರು ದಲೈ ಲಾಮಾ ಹಾಗೂ ಬಾಲಿವುಡ್ ನಟ ಶಾರುಖ್ ಖಾನ್ ಅವರನ್ನು ಒಟ್ಟು ನೋಡುವ ಭಾಗ್ಯ ಅಭಿಮಾನಿಗಳದ್ದು. ಖಾಸಗಿ ಹೆಲಿಕಾಪ್ಟರಿನಲ್ಲಿ ಬಂದಿಳಿದ ಶಾರುಖ್ ಬಿಳಿ ವಸ್ತ್ರವೊಂದನ್ನು ಕತ್ತಿಗೆ ಸುತ್ತಿಕೊಂಡು ಬಂದಿದ್ದರು. ಆಸ್ತಿಕ ಭಾವ ಅವರಲ್ಲಿ ತುಂಬಿತ್ತು.
ತಮ್ಮ ನಿರ್ಮಾಣದ ‘ಅಶೋಕ ದಿ ಗ್ರೇಟ್’ ಚಿತ್ರಕ್ಕೆ ದಲೈ ಲಾಮಾ ಅವರ ಆಶೀರ್ವಾದ ಪಡೆಯಲು ಶಾರುಖ್ ಬಂದಿದ್ದರು. ಬೌದ್ಧ ಸನ್ಯಾಸಿಗಳ ಸ್ವಾಗತ ಅವರಿಗಾಗಿ ಕಾದಿತ್ತು. ಬಿಗಿ ಪೊಲೀಸ್ ಪಹರೆಯ ನಡುವೆ ಧರ್ಮ ಗುರು- ಸೆನ್ಸೇಷನ್ ನಟರ ಭೇಟಿಯಾಯಿತು. ಸಾಂಪ್ರದಾಯಿಕ ಶಾಲನ್ನು ಹೊದಿಸಿದ ಧರ್ಮ ಗುರು ಶಾರುಖ್ಗೆ ಆಶೀರ್ವಾದ ಮಾಡಿದರು.
ಭೇಟಿಯ ನಂತರ ಸುದ್ದಿಗಾರರೊಟ್ಟಿಗೆ ಶಾರುಖ್ ಮಾತಾಡಿದರು. ...
ಅಕ್ಟೋಬರ್ನಲ್ಲಿ ‘ಅಶೋಕ ದಿ ಗ್ರೇಟ್’ ಚಿತ್ರ ತೆರೆಕಾಣಲಿದ್ದು, ಗುರುಗಳ ಆಶೀರ್ವಾದ ಪಡೆಯಲು ಬಂದಿದ್ದೆ. ನಾನು ಧಾರ್ಮಿಕ ಮನುಷ್ಯನಲ್ಲ. ಆದರೆ, ಎಲ್ಲಾ ಧರ್ಮಗಳನ್ನು ಗೌರವಿಸುತ್ತೇನೆ. ದಲೈ ಲಾಮಾ ಅವರು ಶಾಂತಿ ಮತ್ತು ಪ್ರೀತಿ ಹಂಚುತ್ತಿದ್ದಾರೆ. ಈ ಕಾರಣಕ್ಕೆ ಅವರನ್ನು ಕಂಡರೆ ನನಗೆ ಅಪಾರ ಗೌರವ.
ನನ್ನ ಮಗ ಆರ್ಯನ್ಗೆ ಗುರುಗಳ ಉಪನ್ಯಾಸ ಕೇಳಿಸಬೇಕೆಂಬುದು ನನ್ನ ಆಸೆ. ನನ್ನ ಹೆಂಡತಿ ಗೌರಿ ಜೊತೆಯಲ್ಲಿ ಆತನನ್ನು ಮತ್ತೆ ಇಲ್ಲಿಗೆ ಕರೆದುಕೊಂಡು ಬರುತ್ತೇನೆ. ಐತಿಹಾಸಿಕ ಚಿತ್ರಗಳು ಜನರಿಗೆ ಬದಲಾವಣೆ ನೀಡಲಿವೆ. ಈ ಕಾರಣಕ್ಕೇ ‘ಅಶೋಕ ದಿ ಗ್ರೇಟ್’ ಬಗ್ಗೆ ತುಂಬಾ ಸೀರಿಯಸ್ ಆಗಿರುವುದು. ಡಿಸೆಂಬರ್ವರೆಗೆ ಈ ಕೆಲಸ ಬಿಟ್ಟು ಬೇರೆ ಯಾವ ಕೆಲಸವನ್ನೂ ನಾನು ಒಪ್ಪಿಕೊಂಡಿಲ್ಲ. ‘ಅಶೋಕ ದಿ ಗ್ರೇಟ್’ ಚಿತ್ರದಲ್ಲಿ ದಲೈ ಲಾಮಾ ಸಂದೇಶವೂ ಇರುತ್ತದೆ.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications