ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಕಡಲು ಪಾಲಾದ ಮೂವರು ಯುವಕರ ಮೃತ ದೇಹ ಪತ್ತೆ
ಮಂಗಳೂರು : ಪಣಂಬೂರು ಕಡಲ ದಂಡೆಯಲ್ಲಿ ನವಮಂಗಳೂರು ಬಂದರು ಮಂಡಳಿಗೆ ಸೇರಿದ ಪ್ರದೇಶದಲ್ಲಿ ಬುಧವಾರ ಬೆಳಗ್ಗೆ ಮೂವರು ತರುಣರ ಮೃತ ದೇಹಗಳು ಪತ್ತೆಯಾಗಿದೆ.
ಮೃತರ ಜೊತೆಗಿದ್ದ ಓರ್ವ ವ್ಯಕ್ತಿ ಹಾಗೂ ಕಾರು ನಾಪತ್ತೆಯಾಗಿರುವುದು ವರದಿಯಾಗಿದ್ದು, ಮೃತರನ್ನು ಕೋಡಿಕಲ್ ನಿವಾಸಿ ಮನೋಜ್(31), ಕೊಡಿಯಾಲ್ ಗುತ್ತು ಪ್ರತ್ಯಕ್ಷ ರೈ ಯಾನೆ ಪಕ್ಕು (32), ಕೊಡಗಿನ ವಿರಾಜ್ಪೇಟೆ ನಿವಾಸಿ ಆನಂದ್ ಎಂದು ಗುರುತಿಸಲಾಗಿದೆ.ಇವರ ಜೊತೆಗಿದ್ದ ಪ್ರೇಮ್ ಕನ್ನಯ್ಯ (31) ಕಾಣೆಯಾಗಿದ್ದಾರೆ.
(ಇನ್ಫೋ ವಾರ್ತೆ)
Comments
Story first published: Thursday, August 2, 2001, 0:00 [IST]