ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಡಲು ಪಾಲಾದ ಮೂವರು ಯುವಕರ ಮೃತ ದೇಹ ಪತ್ತೆ

By Staff
|
Google Oneindia Kannada News

ಮಂಗಳೂರು : ಪಣಂಬೂರು ಕಡಲ ದಂಡೆಯಲ್ಲಿ ನವಮಂಗಳೂರು ಬಂದರು ಮಂಡಳಿಗೆ ಸೇರಿದ ಪ್ರದೇಶದಲ್ಲಿ ಬುಧವಾರ ಬೆಳಗ್ಗೆ ಮೂವರು ತರುಣರ ಮೃತ ದೇಹಗಳು ಪತ್ತೆಯಾಗಿದೆ.

ಮೃತರ ಜೊತೆಗಿದ್ದ ಓರ್ವ ವ್ಯಕ್ತಿ ಹಾಗೂ ಕಾರು ನಾಪತ್ತೆಯಾಗಿರುವುದು ವರದಿಯಾಗಿದ್ದು, ಮೃತರನ್ನು ಕೋಡಿಕಲ್‌ ನಿವಾಸಿ ಮನೋಜ್‌(31), ಕೊಡಿಯಾಲ್‌ ಗುತ್ತು ಪ್ರತ್ಯಕ್ಷ ರೈ ಯಾನೆ ಪಕ್ಕು (32), ಕೊಡಗಿನ ವಿರಾಜ್‌ಪೇಟೆ ನಿವಾಸಿ ಆನಂದ್‌ ಎಂದು ಗುರುತಿಸಲಾಗಿದೆ.ಇವರ ಜೊತೆಗಿದ್ದ ಪ್ರೇಮ್‌ ಕನ್ನಯ್ಯ (31) ಕಾಣೆಯಾಗಿದ್ದಾರೆ.

ನಾಲ್ಕು ಮಂದಿ ತರುಣರು ಸ್ನೇಹಿತರಾಗಿದ್ದು, ಭಾ ನುವಾರ ನಗರದ ಹೋಟೆಲೊಂದರಲ್ಲಿ ಜತೆಯಾಗಿ ಊಟವಾದ ಬಳಿಕ ಕಾರಿನಲ್ಲಿ ತಲಪಾಡಿ ಕಡೆ ಹೋಗಿರುವುದಾಗಿ ತಿಳಿದು ಬಂದಿದೆ. ಸಾವಿನ ಕಾರಣ ಸ್ಪಷ್ಟವಾಗಿಲ್ಲವಾದರೂ ನೀರಲ್ಲಿ ಮುಳುಗಿದವರನ್ನು ರಕ್ಷಿಸಲೆಂದು ಒಬ್ಬೊಬ್ಬರಾಗಿ ಧುಮುಕಿ ಮೇಲೇಳಲಾಗದೇ ಸಾವನ್ನಪ್ಪಿರಬೇಕೆಂದು ಶಂಕಿಸಲಾಗಿದೆ.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X