ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಆ.9 ರಂದು ರಾಜ್ಯಾದ್ಯಂತ ಕಾಲೇಜು ಅಧ್ಯಾಪಕರಿಂದ ತರಗತಿ ಬಹಿಷ್ಕಾರ
ಬೆಂಗಳೂರು : ಆಗಸ್ಟ್ 9 ರಂದು ರಾಜ್ಯಾದ್ಯಂತ ಕಾಲೇಜು ಬಂದ್ಗೆ ‘ರಾಜ್ಯ ವಿಶ್ವ ವಿದ್ಯಾಲಯ ಮತ್ತು ಕಾಲೇಜು ಅಧ್ಯಾಪಕರ ಒಕ್ಕೂಟಗಳ ಸಂಘ’ ಕರೆ ನೀಡಿದೆ.
ಕಾಲೇಜು ಶಿಕ್ಷಣವನ್ನು ಅಸ್ಥಿರಗೊಳಿಸುವ ಸರ್ಕಾರದ ಉನ್ನತ ಶಿಕ್ಷಣ ನೀತಿಯನ್ನು ಪ್ರತಿಭಟಿಸಿ ಈ ಬಂದ್ಗೆ ಕರೆ ನೀಡಲಾಗಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಒಕ್ಕೂಟದ ಅಧ್ಯಕ್ಷ ರವೀಂದ್ರ ರೇಷ್ಮೆ ತಿಳಿಸಿದರು. ಆಗಸ್ಟ್ 9 ರಂದು ಎಲ್ಲ ಪದವಿ ಕಾಲೇಜು ಅಧ್ಯಾಪಕರು ತರಗತಿಗಳನ್ನು ಬಹಿಷ್ಕರಿಸುವ ಮೂಲಕ ಸರ್ಕಾರದ ಉನ್ನತ ಶಿಕ್ಷಣ ನೀತಿಯನ್ನು ಪ್ರತಿಭಟಿಸುವರು ಎಂದು ಅವರು ಹೇಳಿದರು.
(ಇನ್ಫೋ ವಾರ್ತೆ)
Comments
Story first published: Wednesday, August 1, 2001, 0:00 [IST]