ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆ.9 ರಂದು ರಾಜ್ಯಾದ್ಯಂತ ಕಾಲೇಜು ಅಧ್ಯಾಪಕರಿಂದ ತರಗತಿ ಬಹಿಷ್ಕಾರ

By Staff
|
Google Oneindia Kannada News

ಬೆಂಗಳೂರು : ಆಗಸ್ಟ್‌ 9 ರಂದು ರಾಜ್ಯಾದ್ಯಂತ ಕಾಲೇಜು ಬಂದ್‌ಗೆ ‘ರಾಜ್ಯ ವಿಶ್ವ ವಿದ್ಯಾಲಯ ಮತ್ತು ಕಾಲೇಜು ಅಧ್ಯಾಪಕರ ಒಕ್ಕೂಟಗಳ ಸಂಘ’ ಕರೆ ನೀಡಿದೆ.

ಕಾಲೇಜು ಶಿಕ್ಷಣವನ್ನು ಅಸ್ಥಿರಗೊಳಿಸುವ ಸರ್ಕಾರದ ಉನ್ನತ ಶಿಕ್ಷಣ ನೀತಿಯನ್ನು ಪ್ರತಿಭಟಿಸಿ ಈ ಬಂದ್‌ಗೆ ಕರೆ ನೀಡಲಾಗಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಒಕ್ಕೂಟದ ಅಧ್ಯಕ್ಷ ರವೀಂದ್ರ ರೇಷ್ಮೆ ತಿಳಿಸಿದರು. ಆಗಸ್ಟ್‌ 9 ರಂದು ಎಲ್ಲ ಪದವಿ ಕಾಲೇಜು ಅಧ್ಯಾಪಕರು ತರಗತಿಗಳನ್ನು ಬಹಿಷ್ಕರಿಸುವ ಮೂಲಕ ಸರ್ಕಾರದ ಉನ್ನತ ಶಿಕ್ಷಣ ನೀತಿಯನ್ನು ಪ್ರತಿಭಟಿಸುವರು ಎಂದು ಅವರು ಹೇಳಿದರು.

ಸೋಮವಾರ ನಡೆದ ‘ರಾಜ್ಯ ವಿಶ್ವ ವಿದ್ಯಾಲಯ ಮತ್ತು ಕಾಲೇಜು ಅಧ್ಯಾಪಕರ ಒಕ್ಕೂಟಗಳ ಸಂಘ’ ದ ಸಭೆಯಲ್ಲಿ ಬಂದ್‌ ತೀರ್ಮಾನವನ್ನು ಕೈಗೊಳ್ಳಲಾಗಿದ್ದು , ಸರ್ಕಾರ ತನ್ನ ನೀತಿಯನ್ನು ಮಾರ್ಪಡಿಸಿಕೊಳ್ಳದಿದ್ದಲ್ಲಿ ಮುಂದಿನ ದಿನಗಳಲ್ಲಿ ಪ್ರತಿಭಟನೆಯನ್ನು ತೀವ್ರಗೊಳಿಸಲಾಗುವುದು ಎಂದು ರವೀಂದ್ರ ರೇಷ್ಮೆ ಹೇಳಿದರು.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X