Get Updates
Get notified of breaking news, exclusive insights, and must-see stories!

ಮೋಡ ಕರಗಿಸಿ, ಮಳೆ ಸುರಿಸಲು 1 ಕೋಟಿ ರು.ನೆರವು ಯಾಚನೆ!

ಬೆಂಗಳೂರು: ಮೋಡಗಳ ಕರಗಿಸಿ, ಮಾನವನೇ ಮಳೆ ಸುರಿಸುವಂತೆ ಮಾಡುವಷ್ಟು ನಮ್ಮ ವಿಜ್ಞಾನ ಮುಂದುವರೆದಿದೆಯೇ ? ಹಾಗಿದ್ದರೆ ಕರ್ನಾಟಕ ಎದುರಿಸುತ್ತಿರುವ ಬರ ಪರಿಸ್ಥಿತಿ ನಿವಾರಣೆಗೆ ಇದೇ ಯಾಕೆ ಮಾರ್ಗವಾಗಬಾರದು ?

ಬರ ಪರಿಹಾರಕ್ಕೆ ರಾಜ್ಯ ಸರ್ಕಾರ ಕೇಂದ್ರಕ್ಕೆ ಸಲ್ಲಿಸಿರುವ ಮನವಿ ಪತ್ರದಲ್ಲಿ ರಾಜ್ಯಸಭೆಯ ಮಾಜಿ ಸದಸ್ಯ ಎಫ್‌.ಎಂ.ಖಾನ್‌ ಈ ವಿಷಯವನ್ನೂ ಪ್ರಸ್ತಾಪಿಸಿದ್ದಾರೆ. ಬರ ಪರಿಹಾರಕ್ಕೆ ನೆರವು ನೀಡುವುದರ ಜೊತೆಗೆ ಮೋಡಗಳ ಮೇಲೆ ರಾಸಾಯನಿಕಗಳನ್ನು ಸಿಂಪಡಿಸಿ ಮಳೆ ಸುರಿಸಲು 1 ಕೋಟಿ ರುಪಾಯಿ ಪ್ರತ್ಯೇಕ ನೆರವನ್ನು ನೀಡುವಂತೆ ಕೇಂದ್ರ ಸರ್ಕಾರವನ್ನು ಕೋರಲಾಗಿದೆ.

1975ರಲ್ಲಿ ಲಿಂಗನಮಕ್ಕಿ ಜಲಾನಯನ ಪ್ರದೇಶಗಳಲ್ಲಿ ರಾಸಾಯನಿಕಗಳನ್ನು ಸಿಂಪಡಿಸಿ ಮಳೆ ಸುರಿಸುವ ವಿಧಾನ ಯಶಸ್ವಿಯಾಗಿದ್ದನ್ನು ಉದಾಹರಿಸಿರುವ ಖಾನ್‌, ಈ ವಿಧಾನವನ್ನು ರಾಜಕಾರಣಿಗಳು ತಾತ್ಸಾರ ಧೋರಣೆಯಿಂದ ಕಾಣುತ್ತಿರುವುದಕ್ಕೆ ವಿಷಾದ ವ್ಯಕ್ತಪಡಿಸಿದ್ದಾರೆ.

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+