ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಮೋಡ ಕರಗಿಸಿ, ಮಳೆ ಸುರಿಸಲು 1 ಕೋಟಿ ರು.ನೆರವು ಯಾಚನೆ!
ಬೆಂಗಳೂರು: ಮೋಡಗಳ ಕರಗಿಸಿ, ಮಾನವನೇ ಮಳೆ ಸುರಿಸುವಂತೆ ಮಾಡುವಷ್ಟು ನಮ್ಮ ವಿಜ್ಞಾನ ಮುಂದುವರೆದಿದೆಯೇ ? ಹಾಗಿದ್ದರೆ ಕರ್ನಾಟಕ ಎದುರಿಸುತ್ತಿರುವ ಬರ ಪರಿಸ್ಥಿತಿ ನಿವಾರಣೆಗೆ ಇದೇ ಯಾಕೆ ಮಾರ್ಗವಾಗಬಾರದು ?
ಬರ ಪರಿಹಾರಕ್ಕೆ ರಾಜ್ಯ ಸರ್ಕಾರ ಕೇಂದ್ರಕ್ಕೆ ಸಲ್ಲಿಸಿರುವ ಮನವಿ ಪತ್ರದಲ್ಲಿ ರಾಜ್ಯಸಭೆಯ ಮಾಜಿ ಸದಸ್ಯ ಎಫ್.ಎಂ.ಖಾನ್ ಈ ವಿಷಯವನ್ನೂ ಪ್ರಸ್ತಾಪಿಸಿದ್ದಾರೆ. ಬರ ಪರಿಹಾರಕ್ಕೆ ನೆರವು ನೀಡುವುದರ ಜೊತೆಗೆ ಮೋಡಗಳ ಮೇಲೆ ರಾಸಾಯನಿಕಗಳನ್ನು ಸಿಂಪಡಿಸಿ ಮಳೆ ಸುರಿಸಲು 1 ಕೋಟಿ ರುಪಾಯಿ ಪ್ರತ್ಯೇಕ ನೆರವನ್ನು ನೀಡುವಂತೆ ಕೇಂದ್ರ ಸರ್ಕಾರವನ್ನು ಕೋರಲಾಗಿದೆ.
1975ರಲ್ಲಿ ಲಿಂಗನಮಕ್ಕಿ ಜಲಾನಯನ ಪ್ರದೇಶಗಳಲ್ಲಿ ರಾಸಾಯನಿಕಗಳನ್ನು ಸಿಂಪಡಿಸಿ ಮಳೆ ಸುರಿಸುವ ವಿಧಾನ ಯಶಸ್ವಿಯಾಗಿದ್ದನ್ನು ಉದಾಹರಿಸಿರುವ ಖಾನ್, ಈ ವಿಧಾನವನ್ನು ರಾಜಕಾರಣಿಗಳು ತಾತ್ಸಾರ ಧೋರಣೆಯಿಂದ ಕಾಣುತ್ತಿರುವುದಕ್ಕೆ ವಿಷಾದ ವ್ಯಕ್ತಪಡಿಸಿದ್ದಾರೆ.
(ಇನ್ಫೋ ವಾರ್ತೆ)
Comments
Story first published: Wednesday, August 1, 2001, 0:00 [IST]