Get Updates
Get notified of breaking news, exclusive insights, and must-see stories!

ಬೃಂದಾವನ ಗಾರ್ಡನ್ಸ್‌ ಆಧುನೀಕರಣಕ್ಕೆ ವಿಶೇಷ ಯೋಜನೆ

ಬೆಂಗಳೂರು : ಕೃಷ್ಣರಾಜ ಸಾಗರ ಅಣೆಕಟ್ಟೆ ನೋಡಲು ಹೋಗುವವರಿಗೆ ಪಕ್ಕದಲ್ಲೇ ಇರುವ ಬೃಂದಾವನ ಗಾರ್ಡನ್ಸ್‌ ಪ್ರಮುಖ ಆಕರ್ಷಣೆ. ಆದರೆ, ಇತ್ತೀಚೆಗೆ ಇಲ್ಲಿನ ನಿರ್ವಹಣೆ ಬಗ್ಗೆ ಹಲವು ದೂರುಗಳು ಬಂದಿರುವ ಹಿನ್ನೆಲೆಯಲ್ಲಿ ಉದ್ಯಾನವನ್ನು ಆಧುನೀಕರಣಗೊಳಿಸಲು ಬೃಹತ್‌ ಯೋಜನೆಯಾಂದನ್ನು ತಯಾರಿಸಲಾಗಿದೆ.

ಈ ವಿಷಯವನ್ನು ರಾಜ್ಯ ಜಲಸಂಪನ್ಮೂಲ ಸಚಿವ ಎಚ್‌.ಕೆ. ಪಾಟೀಲ್‌ ವಿಧಾನಸಭೆಯಲ್ಲಿ ಪ್ರಕಟಿಸಿದ್ದಾರೆ. ಈ ಯೋಜನೆಯಡಿಯಲ್ಲಿ ಬೃಂದಾವನ ಗಾರ್ಡನ್ಸ್‌ಗೆ ಮತ್ತೆ ಹಿಂದಿನ ಮೆರುಗು ತಂದುಕೊಡಲಾಗುವುದು ಎಂದು ಅವರು ಹೇಳಿದರು.

ಆಧುನೀಕರಣದ ನೀಲನಕ್ಷೆ ಸಿದ್ಧವಾಗಿದೆ. ಇಲಾಖಾ ಕಾರ್ಯದರ್ಶಿಗಳ ನೇತೃತ್ವದಲ್ಲಿ ಸಮಿತಿಯಾಂದನ್ನು ರಚಿಸಲಾಗಿದೆ. ಉದ್ಯಾನದಲ್ಲಿ ದೋಣಿ ವಿಹಾರ ಹಾಗೂ ಕೊಯಮತ್ತೂರಿನ ಬಳಿ ಇರುವ ಬ್ಲಾಕ್‌ ಥಂಡರ್‌ (ಜಲ ಸಾಹಸ ಮನರಂಜನೆ ಪಾರ್ಕ್‌) ಮಾದರಿಯ ಪಾರ್ಕ್‌ ನಿರ್ಮಾಣ ಮೊದಲಾದ ಕಾಮಗಾರಿಗಳನ್ನು ಅತಿಶೀಘ್ರದಲ್ಲೇ ಕೈಗೆತ್ತಿಕೊಳ್ಳಲಾಗುವುದು ಎಂದು ಅವರು ಹೇಳಿದರು.

ಉದ್ಯಾನದ ಆಧುನೀಕರಣ ವಿಷಯಕ್ಕೆ ಸಂಬಂಧಿಸಿದಂತೆ ರಾಜ್ಯ ಪ್ರವಾಸೋದ್ಯಮ ಸಚಿವ ರೋಷನ್‌ ಬೇಗ್‌ ಅವರೊಂದಿಗೆ ಚರ್ಚಿಸಲಾಗಿದೆ. ಸಚಿವರು ಸ್ಥಳ ಪರಿಶೀಲನೆ ಸಹ ನಡೆಸಿದ್ದಾರೆ ಎಂದು ಪಾರ್ವತಮ್ಮ ಶ್ರೀಕಂಠಯ್ಯ ಅವರ ಪ್ರಶ್ನೆಗೆ ನೀಡಿದ ಉತ್ತರದಲ್ಲಿ ಪಾಟೀಲ್‌ ತಿಳಿಸಿದರು.

ಕೆ.ಆರ್‌.ಎಸ್‌.ನಲ್ಲಿ ಪ್ರವೇಶ ದರವನ್ನು 5 ರುಪಾಯಿಯಿಂದ 10 ರು.ಗೆ ಏರಿಸಿರುವ ಬಗ್ಗೆ ರಾಮದಾಸ್‌ ಆಕ್ಷೇಪ ವ್ಯಕ್ತಪಡಿಸಿದರೆ, ಟ್ಯಾಕ್ಸಿಗಳಲ್ಲಿ ಬೃಂದಾವನಕ್ಕೆ ತೆರಳುವವರಿಗೆ ಮೂರು ಹಂತಗಳಲ್ಲಿ 50-60 ರು. ವಿಧಿಸುವ ಮೂಲಕ ಶೋಷಣೆ ಮಾಡಲಾಗುತ್ತಿದೆ ಎಂದು ಆರಗ ಜ್ಞಾನೇಂದ್ರ ಆರೋಪಿಸಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+