Get Updates
Get notified of breaking news, exclusive insights, and must-see stories!

ಯುಟಿಐ ಹಗರಣ : ಬೇಸತ್ತ ಪ್ರಧಾನಿಯಿಂದ ರಾಜೀನಾಮೆ ಇಂಗಿತ

ನವದೆಹಲಿ : ರಾಷ್ಟ್ರೀಯ ಪ್ರಜಾ ಸತ್ತಾತ್ಮಕ ಮೈತ್ರಿ ಕೂಟದ ಒಗ್ಗಟ್ಟು ಹಾಗೂ ಶಿಸ್ತು ಕಾಪಾಡಲು ತಾವು ಅಸಮರ್ಥರಾಗಿರುವ ಕಾರಣ ತಮ್ಮ ಹುದ್ದೆಗೆ ರಾಜೀನಾಮೆ ಕೊಡುವ ಆಶಯವನ್ನು ಪ್ರಧಾನಿ ಎ.ಬಿ.ವಾಜಪೇಯಿ ಮಂಗಳವಾರ ವ್ಯಕ್ತಪಡಿಸಿದ್ದಾರೆ. ಬಿಜೆಪಿಯ ಸಂಸದೀಯ ಸಭೆಯಲ್ಲಿ ಭಾಗವಹಿಸಿ ಅವರು ಮಾತಾಡುತ್ತಿದ್ದರು. ಬಿಜೆಪಿ ಹಿರಿಯ ಸದಸ್ಯರು ರಾಜೀನಾಮೆ ನೀಡಬೇಡಿ ಎಂದು ಪ್ರಧಾನಿಯವರನ್ನು ಕೋರಿದ್ದಾರೆ.

ಯುಟಿಐ ಹಗರಣದಲ್ಲಿ ಪ್ರಧಾನಿ ಕಚೇರಿಯ ಪಾತ್ರವೂ ಇದೆ ಎಂದು ಶಿವಸೇನೆಯ ಸದಸ್ಯ ಸಂಜಯ್‌ ನಿರುಪಮ ಆರೋಪಿಸಿರುವ ಕಾರಣಕ್ಕೆ ಸಭೆಯಲ್ಲಿ ಪ್ರಧಾನಿ ಈ ಆಶಯ ವ್ಯಕ್ತಪಡಿಸಿದರು. ಯುಟಿಐ ಮಾಜಿ ಅಧ್ಯಕ್ಷ ಪಿ.ಎಸ್‌.ಸುಬ್ರಹ್ಮಣ್ಯಂ ಮುಂಬಯಿಯಿಂದ ದೆಹಲಿಗೆ ಜುಲೈ 17ರಿಂದ 21ರ ಅವಧಿಯಲ್ಲಿ ಮಾಡಿದ ದೂರವಾಣಿ ಕರೆಗಳ ಪೈಕಿ ಎರಡು ಕರೆಗಳು ಪ್ರಧಾನಿ ಕಚೇರಿಗೆ ಹೋಗಿದ್ದವು ಎಂಬುದು ಪತ್ತೆಯಾಗಿದೆ ಎಂದು ಸಂಜಯ್‌ ನಿರುಪಮ ಆರೋಪಿಸಿದ್ದಾರೆ.

ಯಾರನ್ನೂ ಹೆಸರಿಸದ ಸಂಜಯ್‌, ಪ್ರಧಾನಿ ಕಚೇರಿಯಲ್ಲಿ ಯಾರಿಗೆ ಕರೆ ಹೋಗಿತ್ತೋ ಅವರು ಈಗ ಯೋಜನಾ ಆಯೋಗದಲ್ಲಿದ್ದಾರೆ. ಪ್ರಸಕ್ತ ವಿತ್ತ ವರ್ಷದ ಬಜೆಟ್ಟು ಸಂಸತ್ತಿನಲ್ಲಿ ಮಂಡನೆಯಾದ ಒಂದು ತಾಸಿಗೆ ಮುಂಚೆ ಪದಚ್ಯುತ ಯುಟಿಐ ಅಧ್ಯಕ್ಷರಿಗೆ ಹಣಕಾಸು ಕಾರ್ಯದರ್ಶಿ ಫೋನಾಯಿಸಿದ್ದರು ಎಂದು ದೂರಿದ್ದಾರೆ.

(ಯುಎನ್‌ಐ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+