ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಾಜನೂರಿನ ಮನೆಯಲ್ಲಿ ಪೂಜೆ ಮಾಡಿ ಮರಳಿದ ಪಾರ್ವತಮ್ಮ

By Staff
|
Google Oneindia Kannada News

ಮೈಸೂರು : ವರನಟ ಡಾ. ರಾಜ್‌ಕುಮಾರ್‌ ಅಪಹರಣ ಪ್ರಕರಣಕ್ಕೆ ಒಂದು ವರ್ಷ ತುಂಬಿದ ಸಂದರ್ಭದಲ್ಲಿ ರಾಜ್‌ ಪತ್ನಿ ಪಾರ್ವತಮ್ಮ ರಾಜ್‌ಕುಮಾರ್‌ ಗಾಜನೂರಿಗೆ ಭೇಟಿ ಕೊಟ್ಟಿದ್ದಾರೆ. ಜುಲೈ 30 ರ ಸೋಮವಾರ ಬಿಗಿಯಾದ ಬಂದೋಬಸ್ತ್‌ ನಡುವೆ ಗಾಜನೂರಿಗೆ ಆಗಮಿಸಿದ ಪಾರ್ವತಮ್ಮ ಸಂಜೆ ಬೆಂಗಳೂರಿಗೆ ವಾಪಸ್ಸಾದರು.

ಗಾಜನೂರಿಗೆ ತೆರಳುವ ಮುನ್ನ ಮೈಸೂರಿನ ದೇವರಾಜ ಮಾರುಕಟ್ಟೆಯಲ್ಲಿ ಪೂಜಾ ಪರಿಕರಗಳನ್ನು ಪಾರ್ವತಮ್ಮ ಖರೀದಿಸಿದರು. ತಮ್ಮ ಹೊಸ ಮನೆಯಲ್ಲಿ ಪೂಜೆ ನಡೆಸಿದ ನಂತರ ಅವರು ಬೆಂಗಳೂರಿಗೆ ವಾಪಸ್ಸಾದರು. ಪಾರ್ವತಮ್ಮನವರ ಭೇಟಿಯನ್ನು ತಿಳಿದ ನೂರಾರು ಮಂದಿ ಗಾಜನೂರಿನ ರಾಜ್‌ ನಿವಾಸದ ಮುಂದೆ ಜಮಾಯಿಸಿದ್ದರು.

ವೀರಪ್ಪನ್‌ ಸೆರೆಯಿಂದ ಬಿಡುಗಡೆಯಾದ ನಂತರ ಈವರೆಗೂ ಗಾಜನೂರಿಗೆ ರಾಜ್‌ಕುಮಾರ್‌ ಭೇಟಿ ನೀಡಿಲ್ಲ . ‘ಗಾಜನೂರು ನನ್ನ ಕನಸಿನಲ್ಲಿಯೇ ಇದೆ. ಅಲ್ಲಿನ ಜನ, ಪರಿಸರವನ್ನು ನೋಡುವ ಬಯಕೆಯಾಗಿದೆ ’ ಎಂದು ಇತ್ತೀಚೆಗಷ್ಟೇ ರಾಜ್‌ ತಮ್ಮ ಅಂತರಂಗವನ್ನು ಸುದ್ದಿಗಾರರಲ್ಲಿ ತೋಡಿಕೊಂಡಿದ್ದರು.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X