Get Updates
Get notified of breaking news, exclusive insights, and must-see stories!

ಹಲವು ವಸ್ತುಗಳಿಗೆ ತೆರಿಗೆ ವಿನಾಯಿತಿ : ಎಸ್‌.ಎಂ. ಕೃಷ್ಣ ಘೋಷಣೆ

ಬೆಂಗಳೂರು : ಯು.ಪಿ.ಎಸ್‌., ವೈದ್ಯಕೀಯ ಉಪಕರಣಗಳ ಮೇಲಿನ ತೆರಿಗೆ ಕಡಿತ, ನಿಮಾನ್ಹ್‌ ಖರೀದಿಸುವ ವೈದ್ಯಕೀಯ ಉಪಕರಣಗಳಿಗೆ ಸಂಪೂರ್ಣ ತೆರಿಗೆ ವಿನಾಯಿತಿ, ರೇಷ್ಮೆ ಹಾಗೂ ಕಂಬಳಿ ಮೇಲಿನ ವಿಲಾಸಿ ತೆರಿಗೆ ಸಂಪೂರ್ಣ ರದ್ದು, ಹಪ್ಪಳದ ಮೇಲಿನ ಮಾರಾಟ ತೆರಿಗೆಗೆ ವಿನಾಯಿತಿ ನೀಡುವುದಾಗಿ ರಾಜ್ಯದ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಘೋಷಿಸಿದ್ದಾರೆ.

ಸೋಮವಾರ ವಿಧಾನಸಭೆಯಲ್ಲಿ ಬಜೆಟ್‌ ಮೇಲೆ ನಡೆದ ಸುದೀರ್ಘ ಚರ್ಚೆಯ ಸಂದರ್ಭದಲ್ಲಿ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದ ಎಸ್‌.ಎಂ. ಕೃಷ್ಣ ಅವರು, ಎಲೆಕ್ಟ್ರಾನಿಕ್‌ ಉಪಕರಣಗಳ ಮೇಲೆ ವಿಧಿಸಲಾಗಿರುವ ಶೇ 12ರಷ್ಟು ತೆರಿಗೆಯನ್ನು ಕಡಿಮೆ ಮಾಡುವ ಬಗ್ಗೆ ಕೂಡ ರಾಜ್ಯ ಸರಕಾರ ಪರಿಶೀಲಿಸುತ್ತಿದೆ. ಯು.ಪಿ.ಎಸ್‌. ಮೇಲಿನ ತೆರಿಗೆಯನ್ನು ಶೇ.10ರಿಂದ 4ಕ್ಕೆ ಇಳಿಸಲಾಗುತ್ತಿದೆ ಎಂದರು.

ಪ್ರವೇಶ ತೆರಿಗೆ ನೀತಿಗೆ ಸುಧಾರಣೆ ತರಲು ಉದ್ದೇಶಿಸಲಾಗಿದೆ. ಬ್ರೆಡ್‌, ಬಟರ್‌ ಐಸ್‌ಕ್ರೀಂ, ಬೀಡಿ, ಸಿಗರೇಟ್‌, ಕಂಪ್ಯೂಟರ್‌, ಕಂಪ್ಯೂಟರ್‌ ಬಿಡಿಭಾಗ, ಸಾಫ್ಟ್‌ವೇರ್‌ಗಳಿಗೆ ಕೂಡ ತೆರಿಗೆ ವಿನಾಯಿತಿ ಪ್ರಕಟಿಸಲಾಗಿದೆ ಎಂದರು. ಕೇಂದ್ರ ಸರಕಾರದಿಂದ 3,071 ಕೋಟಿ ರುಪಾಯಿಗಳ ಆರ್ಥಿಕ ನೆರವು ಬರಬೇಕಿದೆ. ನೀರಾವರಿಗೆ 1,598 ಕೋಟಿ ರು, ವಿದ್ಯುತ್‌ ಕ್ಷೇತ್ರಕ್ಕೆ 2,341 ಕೋಟಿ ರು, ವಸತಿಗಾಗಿ 39 ಕೋಟಿ ರು, ಕುಡಿಯುವ ನೀರಿಗಾಗಿ 708 ಕೋಟಿ ರುಪಾಯಿ, ಕೃಷಿಗೆ 346 ಕೋಟಿ ರು. ರೂಢಿಸಲು ಉದ್ದೇಶಿಸಲಾಗಿದೆ ಎಂದು ಸಭೆಗೆ ತಿಳಿಸಿದರು.

ಬೆಂಗಳೂರು ಮೆಗಾಸಿಟಿ ಯೋಜನೆಯ ಅಡಿಯಲ್ಲಿ ನಗರದ ಹೊರಗೆ 336 ಕೋಟಿ ರುಪಾಯಿ ವೆಚ್ಚದ 29 ಯೋಜನೆಗಳನ್ನು ಕೈಗೆತ್ತಿಕೊಂಡಿರುವುದಾಗಿ ಅವರು ತಿಳಿಸಿದರು. ಬಜೆಟ್‌ ಮೇಲಿನ ಚರ್ಚೆಯಲ್ಲಿ ಕೇವಲ ಟೀಕೆಯನ್ನಷ್ಟೇ ಮಾಡದೆ, ರಾಜ್ಯದ ಹೀತದ ದೃಷ್ಟಿಯಿಂದ ಹಲವು ಉಪಯುಕ್ತ ಹಾಗೂ ರಚನಾತ್ಮಕ ಸಲಹೆಗಳನ್ನು ನೀಡಿದ ಪ್ರತಿಪಕ್ಷಗಳಿಗೆ ಕೃಷ್ಣ ಕೃತಜ್ಞತೆ ಅರ್ಪಿಸಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+