Get Updates
Get notified of breaking news, exclusive insights, and must-see stories!

ಭಾರತ ಯಾತ್ರಾ ಕೇಂದ್ರಕ್ಕೆ ಮಾಜಿ ಪ್ರಧಾನಿಯಿಂದ ಶಿಲಾನ್ಯಾಸ

ಬೆಂಗಳೂರು : ಬೆಂಗಳೂರಿನ ಹೊರವಲಯದಲ್ಲಿ ನಿರ್ಮಿಸಲುದ್ದೇಶಿಸಿರುವ ಭಾರತ ಯಾತ್ರಾ ಕೇಂದ್ರಕ್ಕೆ ಮಾಜಿ ಪ್ರಧಾನಿ ಚಂದ್ರಶೇಖರ್‌ ಸೋಮವಾರ ಶಿಲಾನ್ಯಾಸ ನೆರವೇರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕಲಾವಿದರು, ಇಂದಿನ ವಾಸ್ತವ ಅರ್ಥೈಸಿಕೊಂಡು, ನಾಳಿನ ಬದುಕಿನತ್ತ ದೃಷ್ಟಿ ಹರಿಸಬೇಕು ಎಂದರು.

ಪ್ರಕೃತಿಯು ದೇವರ ಕೊಡುಗೆ. ಈ ದೈವದತ್ತ ಪ್ರಕೃತಿ ಸೌಂದರ್ಯವನ್ನು ಕಲಾವಿದ ವಿಶ್ವಾದ್ಯಂತ ಪಸರಿಸುವ ಪ್ರಯತ್ನ ಮಾಡುತ್ತಾನೆ ಎಂದೂ ಅಭಿಪ್ರಾಯಪಟ್ಟರು. ಉದ್ದೇಶಿತ ಕೇಂದ್ರವು ಬಯಲು ರಂಗಮಂದಿರ ಮತ್ತು ಕಲಾ ಗ್ಯಾಲರಿಯನ್ನು ಒಳಗೊಂಡಿರುತ್ತದೆ.

ಈ ಕಾರ್ಯಕ್ರಮದಲ್ಲಿ ಹೆಸರಾಂತ ಕಲಾವಿದರಾದ ಎಸ್‌.ಜಿ. ವಾಸುದೇವ್‌, ಆರ್‌.ಎಂ. ಹಡಪದ್‌, ಚಿ.ಸು. ಕೃಷ್ಣಸೆಟ್ಟಿ ಹಾಗೂ ಮಾಜಿ ಸಚಿವ ಎಂ.ಪಿ. ಪ್ರಕಾಶ್‌ ಮೊದಲಾದವರು ಪಾಲ್ಗೊಂಡಿದ್ದರು. ಈ ಕಾರ್ಯಕ್ರಮದವನ್ನು ಅರ್ಥಪೂರ್ಣಗೊಳಿಸಲು ಒಂದು ದಿನದ ಕಲಾ ಶಿಬಿರವನ್ನು ಸಹ ಹಮ್ಮಿಕೊಳ್ಳಲಾಗಿತ್ತು.

(ಯು.ಎನ್‌.ಐ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+