ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಭಾರತ ಯಾತ್ರಾ ಕೇಂದ್ರಕ್ಕೆ ಮಾಜಿ ಪ್ರಧಾನಿಯಿಂದ ಶಿಲಾನ್ಯಾಸ
ಬೆಂಗಳೂರು : ಬೆಂಗಳೂರಿನ ಹೊರವಲಯದಲ್ಲಿ ನಿರ್ಮಿಸಲುದ್ದೇಶಿಸಿರುವ ಭಾರತ ಯಾತ್ರಾ ಕೇಂದ್ರಕ್ಕೆ ಮಾಜಿ ಪ್ರಧಾನಿ ಚಂದ್ರಶೇಖರ್ ಸೋಮವಾರ ಶಿಲಾನ್ಯಾಸ ನೆರವೇರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕಲಾವಿದರು, ಇಂದಿನ ವಾಸ್ತವ ಅರ್ಥೈಸಿಕೊಂಡು, ನಾಳಿನ ಬದುಕಿನತ್ತ ದೃಷ್ಟಿ ಹರಿಸಬೇಕು ಎಂದರು.
ಪ್ರಕೃತಿಯು ದೇವರ ಕೊಡುಗೆ. ಈ ದೈವದತ್ತ ಪ್ರಕೃತಿ ಸೌಂದರ್ಯವನ್ನು ಕಲಾವಿದ ವಿಶ್ವಾದ್ಯಂತ ಪಸರಿಸುವ ಪ್ರಯತ್ನ ಮಾಡುತ್ತಾನೆ ಎಂದೂ ಅಭಿಪ್ರಾಯಪಟ್ಟರು. ಉದ್ದೇಶಿತ ಕೇಂದ್ರವು ಬಯಲು ರಂಗಮಂದಿರ ಮತ್ತು ಕಲಾ ಗ್ಯಾಲರಿಯನ್ನು ಒಳಗೊಂಡಿರುತ್ತದೆ.
ಈ ಕಾರ್ಯಕ್ರಮದಲ್ಲಿ ಹೆಸರಾಂತ ಕಲಾವಿದರಾದ ಎಸ್.ಜಿ. ವಾಸುದೇವ್, ಆರ್.ಎಂ. ಹಡಪದ್, ಚಿ.ಸು. ಕೃಷ್ಣಸೆಟ್ಟಿ ಹಾಗೂ ಮಾಜಿ ಸಚಿವ ಎಂ.ಪಿ. ಪ್ರಕಾಶ್ ಮೊದಲಾದವರು ಪಾಲ್ಗೊಂಡಿದ್ದರು. ಈ ಕಾರ್ಯಕ್ರಮದವನ್ನು ಅರ್ಥಪೂರ್ಣಗೊಳಿಸಲು ಒಂದು ದಿನದ ಕಲಾ ಶಿಬಿರವನ್ನು ಸಹ ಹಮ್ಮಿಕೊಳ್ಳಲಾಗಿತ್ತು.
(ಯು.ಎನ್.ಐ)
Comments
Story first published: Monday, July 30, 2001, 5:30 [IST]